Advertisement

ತುಳು ನಾಟಕ ನಿಶ್ಚಯ ಆಂಡ್‌ಗೆ ಮುಹೂರ್ತ

04:41 PM Nov 25, 2017 | Team Udayavani |

ಡೊಂಬಿವಲಿ: ಲೇಖಕ, ನಿರ್ದೇಶಕ, ರಂಗಕಲಾವಿದ ಧನಂಜಯ ಮೂಳೂರು ಇವರ 7ನೇ ಕೃತಿ ನಿಶ್ಚಯ ಆಂಡ್‌ ನಾಟಕದ ಮುಹೂರ್ತವು ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ನ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

Advertisement

ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷ ಆರ್‌. ಕೆ. ಸುವರ್ಣ, ಶಿವಸೇನ ದಕ್ಷಿಣ ಭಾರತೀಯ ಘಟಕ ಥಾಣೆ ಜಿಲ್ಲಾಧ್ಯಕ್ಷ ಜಯ ಪೂಜಾರಿ, ಉಪಾಧ್ಯಕ್ಷ ಸುಭಾಷ್‌ ಶೆಟ್ಟಿ ಇನ್ನಂಜೆ, ಸಂಘದ ಕೋಶಾಧಿಕಾರಿ ಸದಾಶಿವ ಸಾಲ್ಯಾನ್‌ ಅವರು ದೀಪ ಪ್ರಜ್ವಲಿಸಿ ನೂತನ ನಾಟಕಕ್ಕೆ ಶುಭ ಹಾರೈಸಿದರು.

ನಾಟಕದ ಪ್ರತಿಯನ್ನು ಸಂಘದ ಅಧ್ಯಕ್ಷ ಆರ್‌. ಕೆ. ಸುವರ್ಣ, ಲೇಖಕ ಧನಂಜಯ ಮೂಳೂರು ಇವರು ರಂಗಕಲಾವಿದ ಶ್ರೀನಿವಾಸ ಕಾವೂರು ಮತ್ತು ಇತರ ಕಲಾವಿದರಿಗೆ ಹಸ್ತಾಂತರಿಸಿದರು. ಜ. 7ರಂದು ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ನ ವಾರ್ಷಿಕೋತ್ಸವ ಸಂಭ್ರಮದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.

ಕಲಾವಿದರಾಗಿ ಶ್ರೀನಿವಾಸ ಕಾವೂರು, ಅಜೆಕಾರು ಜಯ ಶೆಟ್ಟಿ, ಜಯ ಪೂಜಾರಿ, ಜಗದೀಶ್‌ ಶೆಟ್ಟಿ, ಶೋಭಾ ಟಿ. ಪೂಜಾರಿ, ಚಿತ್ರಾ ಆರ್‌. ಸಾಲ್ಯಾನ್‌, ಬೈಲೂರು ಅರ್ಚನಾ ಜೆ. ಶೆಟ್ಟಿ, ಚಂದ್ರಹಾಸ ರೈ, ಉದಯಾ ಜೆ. ಶೆಟ್ಟಿ, ಕೆ. ಕೆ. ಸಾಲ್ಯಾನ್‌, ವಿಶ್ವನಾಥ್‌ ಶೆಟ್ಟಿ, ವಿನೋದ್‌ ಕರ್ಕೇರ, ತೃಪ್ತಿ ಕುಂದರ್‌, ಗುರುರಾಜ ಸುವರ್ಣ, ವಿನೀತ್‌ ಕೆ. ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ಸಂಘದ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next