Advertisement

ಅಲ್ಲಿ ಯಾರಿಗೂ ಕನ್ನಡ ಗೊತ್ತಿರಲಿಲ್ಲ : ದೆಹಲಿಯಲ್ಲಾದ ಅನುಭವ ಬಿಚ್ಚಿಟ್ಟ ವೃಕ್ಷದೇವತೆ

04:01 PM Nov 09, 2021 | Team Udayavani |

ಅಂಕೋಲಾ : ವೃಕ್ಷದೇವತೆ ಎಂದೇ ಹೆಸರಾದ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕ್ಷಣ ಎಲ್ಲರ ಹೃದಯಗಳಲ್ಲಿ ಚಿರ ಸ್ಥಾಯಿಯಾಗಿ ಉಳಿದಿದೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಎಂದಿನ ದಿರಸಿನಲ್ಲೇ  ಪ್ರಶಸ್ತಿಯನ್ನು ಸ್ವೀಕರಿಸಿದರು.

Advertisement

ತಾಯ್ನಾಡಿಗೆ ಮರಳಿದ ಮೇಲೆ ಪ್ರಶಸ್ತಿ ಪಡೆದ ಕ್ಷಣಗಳ ಬಗ್ಗೆ ಹೇಳಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ… ನಾನ್ ಹೇಳಿದ್ದು ಅವರಿಗೆ ಗೊತ್ತಾಗ್ತಾ ಇರಲಿಲ್ಲ. ಅವರು ಹೇಳಿದ್ದು ನನಗೆ ಗೊತ್ತಾಗುತ್ತಿರಲಿಲ್ಲ. ಸುಮ್ಮನೆ ಎಲ್ಲದಕ್ಕೂ ಹೂ.. ಹೂ.. ಎಂದು ತಲೆಯಲ್ಲಾಡಿಸುತ್ತಿದ್ದರು ಎಂದು ತುಳಿಸಿಗೌಡ ಹೇಳಿದರು.

ಅಲ್ಲಿ ಭಯಂಕರ ಜನ, ಬರೀ ಪ್ರಶಸ್ತಿ ಪಡೆದವರೇ ಇದ್ದರು ಬಾಕಿ ಜನ ಜಾಸ್ತಿ ಇರಲಿಲ್ಲ. ಅಲ್ಲಿ ಯಾರಿಗೂ ಕನ್ನಡ ಬರೋದಿಲ್ಲ… ಮೋದಿ ಹತ್ರಾನೂ ಮಾತನಾಡಿದೆ ಆದ್ರೆ ಅವರಿಗೂ ಕನ್ನಡ ಬರುವುದಿಲ್ಲ.. ಬರೀ ತಲೆಯಲ್ಲಾಡಿಸುತ್ತ ಹೂ ಹೂ ಎನ್ನುತ್ತಿದ್ರು ಎಂದು ವೃಕ್ಷ ಮಾತೆ  ನಗು ನಗುತ್ತಲೇ ಹೇಳಿಕೊಂಡರು.

ನಾನು ಗಿಡ ನೆಡುತ್ತೇನೆ ಎಂದು ಹೇಳಿ ಪ್ರಶಸ್ತಿ ಪಡೆದೆ. ಅವರಿಗೆ ಕನ್ನಡ ಗೊತ್ತಾಗುತ್ತಿರಲಿಲ್ಲ ಬರೀ ಹಾ.. ಹಾ.. ಎನ್ನುತ್ತಿದ್ರು ಎಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆದ ಅನುಭವನ್ನು ತುಳಸಿ ಗೌಡ ನಗುತ್ತಲೇ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next