Advertisement

TSPSC ಪೇಪರ್ ಲೀಕ್ ; ಬಿಡುಗಡೆಯಾದ ಬಳಿಕ ಕಿಡಿ ಕಾರಿದ ಬಂಡಿ ಸಂಜಯ್

07:55 PM Apr 07, 2023 | Team Udayavani |

ಕರೀಂನಗರ: ಎಸ್‌ಎಸ್‌ಸಿ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಹನಮಕೊಂಡ ನ್ಯಾಯಾಲಯ ಜಾಮೀನು ನೀಡಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕರೀಂನಗರ ಸಂಸದ ಬಂಡಿ ಸಂಜಯ್ ಕುಮಾರ್ ಅವರನ್ನು ಶುಕ್ರವಾರ ಬೆಳಗ್ಗೆ ಕರೀಂನಗರದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

Advertisement

ಬಿಡುಗಡೆಯಾದ ಬಳಿಕ ಮಾತನಾಡಿದ ಬಂಡಿ ಸಂಜಯ್, ತೆಲಂಗಾಣದಲ್ಲಿ TSPSC ಪೇಪರ್ ಲೀಕ್ ಆದ ನಂತರ ಸುಮಾರು 30 ಲಕ್ಷ ವಿದ್ಯಾರ್ಥಿಗಳ ಜೀವನ ನಾಶವಾಗಿದ್ದು, ಇದಕ್ಕೆ ಸಿಎಂ ಪುತ್ರನೇ ಮುಖ್ಯ ಕಾರಣ ಎಂದು ಕಿಡಿ ಕಾರಿದ್ದಾರೆ.

30 ಲಕ್ಷ ವಿದ್ಯಾರ್ಥಿಗಳ ಜೀವನ ಹಾಳು ಮಾಡಿದ ಸಿಎಂ ಪುತ್ರನನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು.ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡಬೇಕು. ನಾವು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.

ಈ ವಿಚಾರವನ್ನು ದಿಕ್ಕು ತಪ್ಪಿಸಲು ಸಿಎಂ ಚಂದ್ರಶೇಖರ್ ಪೇಪರ್ ಲೀಕ್ ಹೆಸರಿನಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ. ಹಿಂದಿ ಪತ್ರಿಕೆಯನ್ನು ಯಾರು ಲೀಕ್ ಮಾಡುತ್ತಾರೆ? ಹಿಂದಿ ಪತ್ರಿಕೆಗಿಂತ ಮೊದಲು ತೆಲುಗು ಪೇಪರ್ ಸೋರಿಕೆಯಾಗಿದೆ, ಅದರ ಬಗ್ಗೆ ಯಾವುದೇ ತನಿಖೆ ಇಲ್ಲ. ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋದವರು ಯಾರು, ಇನ್ವಿಜಿಲೇಟರ್ ಏನು ಮಾಡುತ್ತಿದ್ದಾರೆ, ಸ್ಕ್ವಾಡ್ ಏನಾಯಿತು, ಪೊಲೀಸರು ಎಲ್ಲಿದ್ದಾರೆ? ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next