Advertisement

ಶಿರೂರು: ಪಾದಾಚಾರಿಗೆ ಲಾರಿ ಡಿಕ್ಕಿ; ಸಾವು

12:40 PM Jul 20, 2019 | keerthan |

ಬೈಂದೂರು: ವೃದ್ಧರೋರ್ವರು ರಸ್ತೆ ದಾಟುವಾಗ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಶಿರೂರಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ತಿಮ್ಮಪ್ಪ ಆಚಾರ್‌ (85) ಎಂದು ಗುರುತಿಸಲಾಗಿದೆ.

Advertisement

ಸ್ಥಳೀಯ ನೀರ್ಗದ್ದೆ ನಿವಾಸಿ ತಿಮ್ಮಪ್ಪ ಆಚಾರ್‌ ಅವರು ವೃತ್ತಿಯಲ್ಲಿ ಬಡಗಿಯಾಗಿದ್ದು, ಕುಲುಮೆ ಕೆಲಸದ ಸಲುವಾಗಿ ಶಿರೂರು ಮಾರುಕಟ್ಟೆಗೆ ಹೋಗುತ್ತಿದ್ದರು. ಈ ವೇಳೆ ಕೊಚ್ಚಿನ್‌ ನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಹಣ್ಣು ತುಂಬಿದ ಲಾರಿ ರಸ್ತೆ ದಾಟುತ್ತಿದ್ದ ತಿಮ್ಮಪ್ಪ ಆಚಾರ್‌ ಅವರಿಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.

ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next