Advertisement
ಮಸೂದೆ ಬೆಂಬಲಿಸಿ ಎಂದು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡುತ್ತಿದ್ದೇನೆ. ಹಾಗೆಯೇ ಬಿಎಸ್ಪಿ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯವರೂ ಸದ್ಯ ರಾಜ್ಯಸಭೆಯಲ್ಲಿರುವ ಮಸೂದೆ ಅಂಗೀಕಾರವಾಗುವಂತೆ ಬೆಂಬಲಿಸ ಬೇಕು ಎಂದು ಸಚಿವ ಪ್ರಸಾದ್ ಮನವಿ ಮಾಡಿದ್ದಾರೆ. ಮಸೂದೆ ಅಂಗೀಕಾರಕ್ಕಾಗಿ 5-6 ಬಾರಿ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದರೂ ಫಲ ಸಿಗಲಿಲ್ಲ. ತ್ರಿವಳಿ ತಲಾಖ್ಗೆ 22 ದೇಶಗಳಲ್ಲಿ ನಿಷೇಧ ಹೇರಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಅದನ್ನು ವೋಟ್ ಬ್ಯಾಂಕ್ ಆಗಿ ನೋಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ವರ್ಷದ ಆ.22ರಂದು ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಐವರು ಸದಸ್ಯರ ಸುಪ್ರೀಂ ಕೋರ್ಟ್ನ ನ್ಯಾಯಪೀಠ ತೀರ್ಪು ನೀಡಿತ್ತು. ತಲಾಖ್ ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾಗಿಲ್ಲ ಎಂದು ತೀರ್ಪಿನಲ್ಲಿ ಕೋರ್ಟ್ ಅಭಿಪ್ರಾಯಪಟ್ಟಿತ್ತು.
Related Articles
ಮೂರು ಬಾರಿ ತಲಾಖ್ ಹೇಳಿದರೆ ದಂಡ ಸಹಿತ 3 ವರ್ಷಗಳ ಜೈಲು ಶಿಕ್ಷೆ.
ಪತ್ನಿ ಅಥವಾ ಆಕೆಯ ನಿಕಟ ಸಂಬಂಧಿ ಪೊಲೀಸರಿಗೆ ದೂರು ನೀಡಿದಾಗ ಮಾತ್ರ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ತಲಾಖ್ ಹೇಳಿದ ಬಳಿಕ ಪತಿ ರಾಜಿಗೆ ಬಂದರೂ ಪತ್ನಿ ಮ್ಯಾಜಿಸ್ಟ್ರೇಟ್ ಬಳಿ ಅದಕ್ಕೆ ಸಮ್ಮತಿ ಸೂಚಿಸಬೇಕು. ಪತ್ನಿ ಒಪ್ಪಿದರೆ ಮಾತ್ರ ಬಂಧನಕ್ಕೆ ಒಳಗಾಗಿರುವ ಪತಿಗೆ ಮ್ಯಾಜಿಸ್ಟ್ರೇಟ್ ಜಾಮೀನು ನೀಡಬಹುದು.
ಮಕ್ಕಳ ಮೇಲಿನ ಹಕ್ಕು ಮಹಿಳೆಗೆ ಇರುತ್ತದೆ.
ಮ್ಯಾಜಿಸ್ಟ್ರೇಟ್ ನಿರ್ಧಾರ ಮಾಡುವ ಜೀವನಾಂಶವನ್ನು ಪಾವತಿ ಮಾಡಬೇಕು.
Advertisement
ಕೇಂದ್ರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾದದ್ದು. ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿರುವ ಈ ಪದ್ಧತಿ ನಿಲ್ಲಲಿ.– ಇಶ್ರತ್ ಜಹಾನ್, ಸುಪ್ರೀಂಕೋರ್ಟಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆ