Advertisement

ಭಯಾನಕ ದೃಶ್ಯ;ಎದೆಗೇ ಹೊಕ್ಕ ರೆಂಬೆ,ಆದರೂ ಬದುಕುಳಿದ !!

11:36 AM Nov 29, 2017 | |

ಯಲ್ಲಾಪುರ: ಇಲ್ಲಿಯ ಮಂಚಿಕೇರಿ  ಗ್ರಾಮದಲ್ಲಿ  ನೆಲ್ಲಿಕಾಯಿ ಕೀಳಲೆಂದು ಮರಹತ್ತಿದ ಯುವಕನೊಬ್ಬ ಆಯತಪ್ಪಿ ಬಿದ್ದಾಗ ಆತನ ಪಕ್ಕೆಲುಬಿನಿಂದ ರೆಂಬೆ ಸೀಳಿಕೊಂಡು ಹೊರಬಂದ ಭಯಾನಕ ಘಟನೆ ಸೋಮವಾರ ಮಧ್ಯಾಹ್ನ  ನಡೆದಿದ್ದು,ಇದೀಗ ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್‌ ಆಗಿವೆ.

Advertisement

ಮಹಾಬಲೇಶ್ವರ್‌ ಸಿದ್ಧಿ (21) ಎಂಬ ಯುವಕ ಮರವೇರಿದಾಗ ಆಯತಪ್ಪಿ ಬಿದ್ದಿದ್ದು, ಕೆಳಗಿದ್ದ ರೆಂಬೆಯೊಂದು  ಎಡ ಭಾಗದ ಎದೆಯ ಭಾಗದಪಕ್ಕೆಲುಬನ್ನು ದಾಟಿ ಕೊಂಡು ಹೊರಬಂದಿದೆ. ಸ್ವಲ್ಪ ತಪ್ಪಿದರು ಹೃದಯವನ್ನೇ ಸೀಳಿ ಹೋಗುತ್ತಿತ್ತು. 

ಸಕಾಲಕ್ಕೆ ನೆರವಿಗೆ ಆಗಮಿಸಿದ ಸ್ನೇಹಿತರು  ರೆಂಬೆಯನ್ನು ಹೊರತೆಗೆಯಲು ಯತ್ನಿಸಿದರಾದೂ ಸಾಧ್ಯವಾಗದೇ ಹೋದಾಗ ಹೊಕ್ಕ ಸ್ಥಿತಿಯಲ್ಲೇ  ಶಿರಸಿಯ ಟಿಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿದರು. ದೃಶ್ಯ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು.  ವೈದ್ಯರಿಗೆ ರೆಂಬೆಯನ್ನು ಹೊರ ತೆಗೆಯುವುದು ಸವಾಲಾಗಿ ಪರಿಣಮಿಸಿತು. ಅದೃಷ್ಟವಷಾತ್‌ ಮಹಾಬಲೇಶ್ವರ ಚಿಕಿತ್ಸೆಗೆ ಸ್ಪಂದಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next