Advertisement

India ಜತೆಗಿನ ಒಪ್ಪಂದ ಉಲ್ಲಂಘನೆ: ನವಾಜ್‌ ಶ‌ರೀಫ್ ತಪ್ಪೊಪ್ಪಿಗೆ

11:41 PM May 28, 2024 | Team Udayavani |

ಇಸ್ಲಾಮಾಬಾದ್‌: 1999ರಲ್ಲಿ ಭಾರತ ಮತ್ತು ಪಾಕಿ ಸ್ಥಾನದ ನಡುವೆ ಶಾಂತಿ ಮತ್ತು ಸ್ಥಿರತೆಗಾಗಿ ಮಾಡಿ ಕೊಂಡಿದ್ದ ಒಪ್ಪಂದವನ್ನು ಪಾಕಿಸ್ಥಾನ ಉಲ್ಲಂ ಸಿದೆ. ಇದು ನಮ್ಮದೇ ತಪ್ಪು ಎಂದು ಸ್ವತಃ ಪಾಕ್‌ನ ಮಾಜಿ ಪ್ರಧಾನಿ ನವಾಶ್‌ ಶರೀಫ್ ಮಂಗಳ ವಾರ ಒಪ್ಪಿಕೊಂಡಿದ್ದಾರೆ. ಕಾರ್ಗಿಲ್‌ ಕದನದ ಬಳಿಕ 1998ರ ಮೇ 28ರಂದು ಪಾಕ್‌ 5 ಪರಮಾಣು ಪರೀಕ್ಷೆಗಳನ್ನು ನಡೆಸಿತು. ಆ ಬಳಿಕ ಭಾರತದ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರೇ ಬಂದು ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡರು. ಆದರೆ ಆ ಒಪ್ಪಂದವನ್ನು ನಾವು ಮುರಿದೆವು ಅದು ನಮ್ಮದೇ ತಪ್ಪು!’ ಎಂದು ನವಾಜ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next