Advertisement

ಬಿರು ಬಿಸಿಲಲ್ಲಿ ಪ್ರಯಾಣಿಕರು ಹೈರಾಣ

07:58 PM Apr 10, 2021 | Team Udayavani |

ಯಾದಗಿರಿ: ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ಸೇರಿ ಮೂರು ದಿನ ಪೂರೈಸಿದೆ. ಆದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆ ದಿನೇ ದಿನೇ ನಷ್ಟ ಅನುಭವಿಸುತ್ತಿರುವುದು ಒಂದೆಡೆಯಾದರೆ, ಬಸ್‌ ನಿಲ್ದಾಣವಿದ್ದರೂ ಪ್ರಯಾಣಿಕರು ಅನಿವಾರ್ಯವಾಗಿ ರಸ್ತೆಯಲ್ಲಿ ಬಿರು ಬಿಸಿಲಿನಲ್ಲಿಯೇ ವಾಹನಗಳಿಗಾಗಿ ಪರದಾಡುವಂತಾಗಿದೆ.

Advertisement

ಬಸ್‌, ಜನರಿಲ್ಲದೇ ಬಸ್‌ ನಿಲ್ದಾಣಗಳೆಲ್ಲ ಬಿಕೋ ಎನ್ನುತ್ತಿದ್ದವು. ಬೇಸಿಗೆ ಕಾಲ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುಂತಾಗಿದೆ. ಕೆಂಡದಂತ ಬಿಸಿಲಿನಲ್ಲಿ ಜನರು ಖಾಸಗಿ ವಾಹನಗಳಿಗೆ ಕಾಯುವಂತಾಗಿದ್ದು, ಸಂಬಂಧಿ ಸಿದ ಅಧಿ ಕಾರಿಗಳು ಖಾಸಗಿ ವಾಹನಗಳು ಬಸ್‌ ನಿಲ್ದಾಣದೊಳಗೆ ಪ್ರವೇಶ ನೀಡುವಂತೆ ಕ್ರಮವಹಿಸಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ.

ಖಾಸಗಿ ವಾಹನಗಳು ಬಸ್‌ ನಿಲ್ದಾಣದೊಳಗೆ ನಿಂತರೆ ಕನಿಷ್ಟ ಪ್ರಯಾಣಿಕರು ನೆರಳಿನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಾದರೂ ಆಗುತ್ತದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಸಾರಿಗೆ ನಿಮಯದಂತೆ ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ ಇರುವುದರಿಂದ ವಾಹನ ಚಾಲಕರು ಬಸ್‌ ನಿಲ್ದಾಣದೊಳಗೆ ತೆರಳುತ್ತಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ವಾಹನ ಪ್ರವೇಶಕ್ಕೆ ತಾತ್ಕಾಲಿಕ ಅವಕಾಶ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next