Advertisement

ಕೊನೆಗೂ ಈಡೇರಿತು ಸಾರಿಗೆ ಸೌಲಭ್ಯ! ಶುರುವಾಯ್ತು ಶಿರಸಿ-ವಡ್ಡಿ-ಗೋಕರ್ಣಕ್ಕೆ ಓಡುವ ಬಸ್ಸು

02:43 PM Mar 02, 2024 | Team Udayavani |

ಶಿರಸಿ: ಶಿರಸಿಯಿಂದ ದೇವನಳ್ಳಿ, ಮತ್ತಿಘಟ್ಟ ಕ್ರಾಸ್, ವಡ್ಡಿಘಾಟ್, ಹಿಲ್ಲೂರು, ಮಾದನಗೇರಿ‌ ಮಾರ್ಗವಾಗಿ ಪುರಾಣ ಪ್ರಸಿದ್ಧ ಗೋಕರ್ಣಕ್ಕೆ  ನೂತನ ಸಾರಿಗೆಗೆ ಚಾಲನೆ‌ ನೀಡಲಾಯಿತು.

Advertisement

ಬಹುಕಾಲದ ಬೇಡಿಕೆಯ‌ ಬೆಳಿಗ್ಗೆ 8ಕ್ಕೆ ಹಾಗೂ ಮಧ್ಯಾಹ್ನ 2ಕ್ಕೆ ಶಿರಸಿ ಹೊಸ ಬಸ್ ನಿಲ್ದಾಣದಿಂದ ಬಿಡಲಾಗುತ್ತದೆ. ಗೋಕರ್ಣದಿಂದ ಬೆಳಿಗ್ಗೆ 11 ಹಾಗೂ ಸಂಜೆ 4.30ಕ್ಕೆ ಶಿರಸಿಗೆ ಬಿಡಲಾಗುತ್ತದೆ.

ಶನಿವಾರ ಶಾಸಕ ಭೀಮಣ್ಣ‌ ನಾಯ್ಕ ಹಸಿರು ನಿಶಾನೆ ತೋರಿದರು.

ಈ ವೇಳೆ ಅಧಿಕಾರಿಗಳಾದ ಪ್ರವೀಣ ಶೇಟ್ , ಅಬ್ಬಾಸ ತೋನಸೆ ಇತರರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next