Advertisement

ಹೊಸ ಗುಜರಿ ನೀತಿ: ವಾಹನ ಅವಧಿ ಮೀರಿದ್ದರೆ ಮನೆಗೇ ಬಂದೀತು ನೋಟಿಸ್‌?

02:21 AM Dec 27, 2022 | Team Udayavani |

ಬೆಂಗಳೂರು: ಅವಧಿ ಮೀರಿದ ವಾಹ ನವನ್ನು ನೀವು ಇನ್ನೂ ಹೊಂದಿದ್ದರೆ ಸಾರಿಗೆ ಇಲಾಖೆಯ ನೋಟಿಸ್‌ ಪಡೆಯಬೇಕಾದೀತು !

Advertisement

ರಾಜ್ಯ ಸರಕಾರ ಗುಜರಿ ನೀತಿ ಪ್ರಕಟಿಸಿದ ಬೆನ್ನಲ್ಲೇ, ಸಾರಿಗೆ ಇಲಾಖೆ ಅನುಷ್ಠಾನಕ್ಕೆ ಮುಂದಾಗಿದೆ. ಸ್ವಯಂ ಪ್ರೇರಣೆಯಿಂದ ನೀಡುವ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ಒಂದು ವೇಳೆ ನಿರೀಕ್ಷಿತ ಸ್ಪಂದನೆ ಸಿಗದಿದ್ದರೆ, ವಾಹನ ಮಾಲಕರಿಗೆ ಸಾರಿಗೆ ಇಲಾಖೆ ನೋಟಿಸ್‌ ನೀಡಿ ಕಾರ್ಯ ಸಾಧನೆಗೆ ಆಲೋಚಿಸಿದ್ದು, ಕಾಲಮಿತಿ ಹಾಕಿಕೊಂಡಿದೆ. ಸರಕಾರವು ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಆಯಾ ಮಾಲಕರಿಗೆ ಹೊಸ ವಾಹನಗಳ ಖರೀದಿ ವೇಳೆ ಶೇ.25ರಷ್ಟು ತೆರಿಗೆ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ.

ಕಾಲಮಿತಿ ಯೋಜನೆ
ಅಂದಾಜಿನಲ್ಲಿ ಹೆಚ್ಚಿನ ಸಂಖ್ಯೆ ಇದ್ದರೂ ಕೇಂದ್ರಸರಕಾರ ತನ್ನಲ್ಲಿನ ಅಂಕಿ ಅಂಶ ದಂತೆ 14.3 ಲಕ್ಷ ವಾಹನಗಳಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಬಹುದು. ಸಾರಿಗೆ ಇಲಾಖೆಯೂ ತನ್ನ ಗುರಿ ಮುಟ್ಟುವವರೆಗೆ ರಿಯಾಯಿತಿ ಅನ್ವಯಿಸಬಹುದು. ಸರಕಾರ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಲಾಗುತ್ತದೆ.

ನಿರಾಸಕ್ತಿ ವ್ಯಕ್ತ
ಈ ಹಿಂದೆ ಟು-ಸ್ಟ್ರೋಕ್‌ ಆಟೋಗಳನ್ನು ಗುಜರಿಗೆ ಹಾಕಲು ರಿಯಾಯಿತಿ ನೀಡಿದ್ದರೂ ಚಾಲಕರಿಂದ ನಿರಾಸಕ್ತಿ ವ್ಯಕ್ತವಾಗಿತ್ತು.

ಗುಜರಿಗೆ ಹಾಕುವ ಪ್ರಕ್ರಿಯೆ ಸಂಪೂರ್ಣ ಸ್ವಯಂಪ್ರೇರಣೆ ಯಿಂದ ಆಗಲಿದೆ. ಒತ್ತಡ ಹೇರುವುದಿಲ್ಲ. ಒಂದು ವೇಳೆ ಸ್ಪಂದನೆ ವ್ಯಕ್ತವಾಗದಿದ್ದರೆ ನೋಟಿಸ್‌ ನೀಡುವ ಕುರಿತು ಆಲೋಚಿಸಲಾಗುವುದು.


Advertisement

 

 

Advertisement

Udayavani is now on Telegram. Click here to join our channel and stay updated with the latest news.

Next