Advertisement

ವಿವಿಧ ರೈಲುಗಳ ಸಂಚಾರ ರದ್ದು-ಮಾರ್ಗ ಬದಲು

06:35 AM Nov 15, 2018 | |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಭಾಗವಾಗಿ ನಾನ್‌ ಇಂಟರ್‌ ಲಾಕಿಂಗ್‌ ಕಾರ್ಯ ಹಿನ್ನೆಲೆಯಲ್ಲಿ ನ.16-27ರವರೆಗೆ ವಿವಿಧ ರೈಲುಗಳ ಸಂಚಾರ ಸಂಪೂರ್ಣ, ಭಾಗಶಃ ರದ್ದು, ಮಾರ್ಗ ಬದಲು ಹಾಗೂ ವೇಳಾಪಟ್ಟಿ ಪರಿಷ್ಕರಣೆ ಆಗಲಿದೆ.

Advertisement

ಮೈಸೂರು ಡಿವಿಜನ್‌ನ ಅರಸಿಕೆರೆ-ಆದಿಹಳ್ಳಿ-ಹೊನ್ನವಳ್ಳಿ-ತಿಪಟೂರು- ಕರಡಿ ರೈಲ್ವೆ ನಿಲ್ದಾಣಗಳ ಮಧ್ಯೆ ಟ್ರ್ಯಾಕ್‌ ಡಬ್ಲಿಂಗ್‌ ಮಾರ್ಗ ಹಿನ್ನೆಲೆಯಲ್ಲಿ, ನಾನ್‌ ಇಂಟರ್‌ಲಾಕಿಂಗ್‌ ಕಾರ್ಯ ಜರುಗಲಿದೆ.

ಸಂಪೂರ್ಣ ರದ್ದು: ನ.22ರಂದು ಯಶವಂತಪುರದಿಂದ ಹೊರಡಲಿದ್ದ ಯಶವಂತಪುರ-ಹರಿಹರ (16577) ರೈಲು; ನ.23ರಂದು ಹರಿಹರದಿಂದ ಹೊರಡುವ ಹರಿಹರ-ಯಶವಂತಪುರ (16578 )ರೈಲು; ನ.23 ರಿಂದ.26ರವರೆಗೆ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಅರಸಿಕೆರೆ ಪ್ಯಾಸೆಂಜರ್‌ (56274) ರೈಲು; ನ.24ರಿಂದ 27ರವರೆಗೆ ಅರಸಿಕೆರೆಯಿಂದ ಪ್ರಯಾಣ ಬೆಳೆಸಬೇಕಿದ್ದ
ಅರಸಿಕೆರೆ-ಹುಬ್ಬಳ್ಳಿ ಪ್ಯಾಸೆಂಜರ್‌ (56273) ರೈಲು ಸೇವೆಯನ್ನು ರದ್ದುಪಡಿಸಲಾಗಿದೆ.

ನ.23ರಿಂದ ನ.26ರವರೆಗೆ ಪ್ರಯಾಣ ಬೆಳೆಸಬೇಕಿದ್ದ ಅರಸಿಕೆರೆ-ಮೈಸೂರು (56265/ 56266) ರೈಲು; ನ.23ರಿಂದ 27ರವರೆಗೆ ಅರಸಿಕೆರೆಯಿಂದ ಹೊರಡಲಿದ್ದ ಅರಸಿಕೆರೆ- ಮೈಸೂರು (56267) ರೈಲು; ನ.23ರಿಂದ 26ರವರೆಗೆ ಮೈಸೂರಿನಿಂದ ಪ್ರಯಾಣಿಸಲಿದ್ದ ಮೈಸೂರು-ಅರಸಿಕೆರೆ (56268) ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು: ನ.18ರಿಂದ 26ರವರೆಗೆ ಬೆಂಗಳೂರು ನಗರ-ಅರಸಿಕೆರೆ (56233) ರೈಲು ಸಂಚಾರವನ್ನು ಅಮ್ಮಸಂದ್ರ-ಅರಸಿಕೆರೆ ಮಧ್ಯೆ;ನ.19ರಿಂದ 27ರವರೆಗೆ ಅರಸಿಕೆರೆ-ಬೆಂಗಳೂರು ನಗರ (56224) ರೈಲು ಸಂಚಾರವನ್ನು ಅಮ್ಮಸಂದ್ರ-ಅರಸಿಕೆರೆ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.

Advertisement

ನ.21ರಿಂದ 26ರವರೆಗೆ ಚಿಕ್ಕಮಗಳೂರು-  ಯಶವಂತಪುರ (56277/56278) ರೈಲು ಸಂಚಾರವನ್ನು ಕಡೂರು-ಯಶವಂತಪುರ ಮಧ್ಯೆ;ನ.19ರಿಂದ 26ರವರೆಗೆ ಹುಬ್ಬಳ್ಳಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌ (17325/17326) ರೈಲು ಸಂಚಾರವನ್ನು ತುಮಕೂರು-ಬೀರೂರ ಮಧ್ಯೆ; ನ.24ರಂದು ತಾಳಗುಪ್ಪ-ಮೈಸೂರು ಪ್ಯಾಸೆಂಜರ್‌ (56275) ರೈಲು ಸಂಚಾರವನ್ನು ಬಿರೂರು- ಮೈಸೂರು ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.

ಮಾರ್ಗ ಬದಲಾವಣೆ: ನ.19ರಂದು ಯಶವಂತಪುರ-ಬರ್ಮಾರ ಎಕ್ಸ್‌ಪ್ರೆಸ್‌ (14805) ರೈಲು ನೆಲಮಂಗಲ, ಶ್ರವಣಬೆಳಗೊಳ, ಹಾಸನ,ಅರಸಿಕೆರೆ ಮಾರ್ಗದಲ್ಲಿ ಸಂಚರಿಸಲಿದ್ದು, ಮಾರ್ಗ ಮಧ್ಯೆಚಿಕ್ಕಬಾಣಾವರದಲ್ಲಿ ನಿಲುಗಡೆಗೊಳ್ಳುವುದು.

ತುಮಕೂರು ಮಾರ್ಗದಿಂದ ಬರುವ ಪ್ರಯಾಣಿಕರು ಚಿಕ್ಕಬಾಣಾವರ ಇಲ್ಲವೇ ಅರಸಿಕೆರೆಯಲ್ಲಿ ರೈಲು ಏರಬೇಕು. ರೈಲುಗಳ ನಿಲುಗಡೆ: ನ.19ರಿಂದ ನ.23ರವರೆಗೆ ಬೆಂಗಳೂರು ನಗರ-ಧಾರವಾಡ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ (12725) ರೈಲು ಬಾಣಸಂದ್ರ ಹಾಗೂ ಅಮ್ಮಸಂದ್ರ ರೈಲ್ವೆ ನಿಲ್ದಾಣಗಳಲ್ಲಿ 20 ನಿಮಿಷ ನಿಲುಗಡೆಗೊಳ್ಳಲಿದೆ. 

ನ.23ರಂದುತಿರುಚನಾಪಳ್ಳಿ- ಶ್ರೀ ಗಂಗಾನಗರ ಎಕ್ಸ್‌ಪ್ರೆಸ್‌ (22498) ರೈಲು ಬಾಣಸಂದ್ರ ರೈಲು ನಿಲ್ದಾಣದಲ್ಲಿ 40 ನಿಮಿಷ ನಿಲುಗಡೆಗೊಳ್ಳುವುದು. ನ.24ರಂದು ಶಿವಮೊಗ್ಗ ಟೌನ್‌-ಮೈಸೂರು ಪ್ಯಾಸೆಂಜರ್‌ (56269) ರೈಲು ಬಾಣಾವರ ನಿಲ್ದಾಣದಲ್ಲಿ 30 ನಿಮಿಷ ನಿಲುಗಡೆಗೊಂಡು ಪ್ರಯಾಣ ಮುಂದುವರಿಸುವುದು.

ಸಮಯ ಪರಿಷ್ಕರಣೆ
ನ.17ರಿಂದ ನ.19ರವರೆಗೆ ಶಿವಮೊಗ್ಗ-ಬೆಂಗಳೂರು ನಗರ (56228) ರೈಲು 120 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸುವುದು. ಅದೇ ರೀತಿ ನ.22ರಂದು 60 ನಿಮಿಷ ಹಾಗೂ ನ.27ರಂದು 80 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸಲಿದೆ. ನ.21ರಂದು ಬೆಂಗಳೂರು ನಗರ-ಹುಬ್ಬಳ್ಳಿ ಪ್ಯಾಸೆಂಜರ್‌ (56913) ರೈಲು 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸುವುದು. ನ.21ರಂದು ಮೈಸೂರು-ಅರಸಿಕೆರೆ ಪ್ಯಾಸೆಂಜರ್‌ (56266) ರೈಲು 60 ನಿಮಿಷ ತಡವಾಗಿ; ಅರಸಿಕೆರೆ-ಮೈಸೂರು ಪ್ಯಾಸೆಂಜರ್‌ (56265) ರೈಲು 60 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸುವುದು ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next