Advertisement

ರಾಜ್ಯದಲ್ಲಿ ವರ್ಗಾವಣೆ ದಂಧೆ ಜೋರಾಗಿದೆ: ಸಚಿವ ಜೋಶಿ

11:15 PM Jul 07, 2023 | Team Udayavani |

ಧಾರವಾಡ: ರಾಜ್ಯದಲ್ಲಿ ಇದೀಗ ವರ್ಗಾವಣೆ ದಂಧೆ ಜೋರಾಗಿದ್ದು, ಈ ಮೂಲಕ ಹಣ ವಸೂಲಿ ಕಾರ್ಯ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯ ಕಾರ್ಯಾವಧಿ ಆರಂಭವಾಗುತ್ತಿದ್ದಂತೆ ವರ್ಗಾವಣೆ ದಂಧೆ ಜೋರಾಗಿದೆ.

Advertisement

ಒಂದೊಂದು ಹುದ್ದೆಗೆ ನಾಲ್ಕೈದು ಬಾರಿ ಪತ್ರ ಕೊಡುತ್ತಿದ್ದು, ಅದರೊಂದಿಗೆ ವಸೂಲಿ ನಡೆದಿದೆ. ರಾಜ್ಯದ ಅನೇಕ ಕಡೆಗಳಲ್ಲಿ ವರ್ಗಾವಣೆ ನಡೆಯುತ್ತಿದ್ದು, ಅಧಿಕಾರಿಗಳಿಂದ ಹಣ ವಸೂಲಿ ನಡೆದಿದೆ. ಆಂತರಿಕ ತನಿಖೆ ನಡೆಸಿದರೆ ಎಷ್ಟು ಹಣ ಪಡೆಯುತ್ತಿದ್ದಾರೆ ಎಂಬ ಸತ್ಯ ಹೊರಬರಲಿದೆ. ಇದರಲ್ಲಿ ರಾಜಕೀಯ ಒತ್ತಡ ಇರುವುದು ಸ್ಪಷ್ಟವಾಗಿದ್ದು, ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next