Advertisement

IAS ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

12:15 AM Aug 09, 2023 | Team Udayavani |

ಬೆಂಗಳೂರು: ಹತ್ತು ಐಎಎಸ್‌ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದ್ದು, ಹುದ್ದೆಯ ನಿರೀಕ್ಷಣೆಯಲ್ಲಿದ್ದ ಆರು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

Advertisement

ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್‌ ಮೊಹ್ಸಿನ್‌ ಅವರನ್ನು ವರ್ಗಾಯಿಸಿದ್ದು, ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಟಿಎಚ್‌ಎಂ ಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯತ್‌ ಸಿಇಒ ಆಗಿ ಪಂಡ್ವೆ ರಾಹುಲ್‌ ತುಕಾರಾಂ ಹಾಗೂ ಚಿತ್ರದುರ್ಗ ಜಿಪಂ ಸಿಇಒ ಆಗಿ ಎಸ್‌.ಜೆ. ಸೋಮಶೇಖರ್‌ ಅವರನ್ನು ವರ್ಗಾಯಿಸಿದೆ.

ಇನ್ನುಳಿದಂತೆ ಹುದ್ದೆಯ ನಿರೀಕ್ಷೆಯಲ್ಲಿದ್ದ ಆರ್‌. ಸ್ನೇಹಾಲ್‌-ಬಿಎಂಟಿಸಿ ಐಟಿ ನಿರ್ದೇಶಕಿ, ಪ್ರಭುಲಿಂಗ ಕವಳಿಕಟ್ಟಿ-ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವೆಗಳ ಆಯುಕ್ತ, ಜಿ. ಲಕ್ಷ್ಮೀಕಾಂತ್‌ ರೆಡ್ಡಿ-ಕೆಯುಐಡಿಎಫ್ಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ, ಎಸ್‌. ರಂಗಪ್ಪ-ಕಂದಾಯ ಇಲಾಖೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶಕ, ಡಾ| ಎಸ್‌. ಆಕಾಶ್‌-ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮತ್ತು ಅನ್ಮೋಲ್‌ ಜೈನ್‌ ಅವರನ್ನು ವಿಚಕ್ಷಣ ದಳದ ಉಪ ಪ್ರಧಾನ ನೋಂದಣಿ ನಿರೀಕ್ಷಕ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next