Advertisement

“ಸಹಕಾರಿ’ಗಳು ರೈತರ ಆಶಾಕಿರಣ

04:16 PM Dec 13, 2020 | Suhan S |

ಬೀದರ: ಸಹಕಾರ ಕ್ಷೇತ್ರವು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಅಭಿಲಾಷೆ ಇರುವ ಜನರಿಗೆ ಅತ್ಯುತ್ತಮ ಅವಕಾಶ ಒದಗಿಸುವ ಕ್ಷೇತ್ರವಾಗಿದೆ. ಜನರಿಗೆ ಆರ್ಥಿಕ ಪ್ರಗತಿ ಜೊತೆಗೆ ಸಾಮಾಜಿಕ ಪ್ರಗತಿ ಸಾಧಿ ಸಲು ನೆರವಾಗುವ ಸಹಕಾರಿ ಸಂಘಗಳು ಗ್ರಾಮೀಣರೈತರ ಆಶಾಕಿರಣಗಳಾಗಿವೆ ಎಂದು ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಸಂಗಮ ಬಾಬುರಾವ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿಕಲಬುರ್ಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಪ್ಯಾಕ್ಸಗಳ ಆಡಳಿತ ಮಂಡಳಿ ಸದಸ್ಯರಿಗಾಗಿ ಆಯೋಜಿಸಿರುವ 3 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಸಂಘಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ಸಹಕಾರಿ ತತ್ವಗಳಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸಂಘದಿಂದ ಅದರ ಸದಸ್ಯರಿಗೆ ಆರ್ಥಿಕ ಅನುಕೂಲಗಳನ್ನು ಒದಗಿಸಿಕೊಡಲು ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಸಹಕಾರಿ ಬ್ಯಾಂಕ್‌ಗಳ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿರುವಇಂದಿನ ದಿನಗಳಲ್ಲಿ ಸಂಘಗಳು ಯಶಸ್ವಿಯಾಗಬೇಕಾದರೆ ಆಡಳಿತ ಮಂಡಳಿ ಸದಸ್ಯರಲ್ಲಿ ವಿಶಾಲ ಮನೋಭಾವ,ಪ್ರಾಮಾಣಿಕತೆ ಮತ್ತು ಜನಸೇವೆ ಮಾಡುವ ಇಚ್ಚೆಯಿರಬೇಕು. ಸಿಬ್ಬಂದಿಗಳಲ್ಲಿ ಶಿಸ್ತು ಮತ್ತು ಕಾರ್ಯತತ್ಪರತೆ ಇರಬೇಕು. ಆಡಳಿತ ಮಂಡಳಿಯು ಸೂಕ್ತ ನಿರ್ವಹಣೆ ಮಾಡಬೇಕು, ಉತ್ತಮ ಆಡಳಿತ ನಿರ್ವಹಣೆ ರೂಢಿಸಿಕೊಂಡ ಸದಸ್ಯರು ಸಂಘದ ಬೆಳವಣಿಗೆಗೆ ಕಾರಣರಾಗುತ್ತಾರೆ. ನೂತನ ವ್ಯವಹಾರಿಕ ನಿರ್ವಹಣೆ ಸೂತ್ರಗಳನ್ನು ಕಲಿಯಲು ತರಬೇತಿಗಳಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದರು.

ಸಹಕಾರಿ ಸಂಘಗಳಲ್ಲಿ ಸಾಲ ತೆಗೆದುಕೊಂಡು ಕಟ್ಟದೇ ಇದ್ದಲ್ಲಿ ಅವ್ಯವಹಾರ ನಡೆಸಿದಲ್ಲಿ ಆಡಳಿತ ಮಂಡಳಿಯೇ ಜವಾಬ್ದಾರಿ ಯಾಗುತ್ತದೆ. ಆದ್ದರಿಂದ ಸಾಲ ಮಂಜೂರಾಗುವ ಸದಸ್ಯರಿಗೆ ಸಾಲ ಮರುಪಾವತಿ ಪ್ರಶಿಕ್ಷಣ ನೀಡಿದ ಬಳಿಕ ಸಾಲ ನೀಡುವ ವ್ಯವಸ್ಥೆ ತರಬೇಕಾಗಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಮಾತನಾಡಿ, ಸಹಕಾರಿ ಸಂಘಗಳು ವ್ಯವಹಾರ ಅಭಿವೃದ್ಧಿ ಮೂಲಕ ಸ್ವಾವಲಂಬಿಗಳಾಗಬೇಕು. ಊರಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ದೂರದೃಷ್ಠಿ ಯೋಜನೆ ಹೊಂದಿರಬೇಕು. ಸಾಲ ಮರುಪಾವತಿಯಾಗದೇ ಇದ್ದಲ್ಲಿ ಸಹಕಾರಿ ಸಂಘಗಳ ಕಾಯ್ದೆ ಕಲಂ 70ರ ಪ್ರಕಾರ ನಿಬಂಧಕರಲ್ಲಿ ಕೇಸ್‌ ದಾಖಲಿಸುವ ಮೂಲಕ ವಸೂಲಿ ಮಾಡಬಹುದಾಗಿದೆ.  ಸರಕಾರ ನೀಡಿರುವ ಕಾನೂನು ಸೌಲಭ್ಯವನ್ನು ಸಂಘಗಳು ಬಳಸಿಕೊಳ್ಳಬೇಕು. ಉತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರೈತರಿಗೆ ನೆರವಾಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.

ಬಸವರಾಜ ಕಲ್ಯಾಣ ಮಾತನಾಡಿದರು. ಕಲಬುರ್ಗಿ ಗಾರೆಂಪಳ್ಳಿ ಸಂಘದ ಅಧ್ಯಕ್ಷ ತುಕ್ಕಪ್ಪಾ, ಚಿಂಚೋಳಿಯ ಜಗದೇವಪ್ಪಾ ಇದ್ದರು. ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪರೇಶ್ಯಾನೆ, ಮಹಾಲಿಂಗ ಕಟಗಿ, ಅಪ್ಪಣ್ಣಾ ಕಾರ್ಯಕ್ರಮ ನಿರ್ವಹಿಸಿದರು. ಎಸ್‌.ಜಿ. ಪಾಟೀಲ ವಂದಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next