Advertisement

ನಿರುದ್ಯೋಗಿಗಳಿಗೆ ತರಬೇತಿ

12:24 PM Dec 10, 2021 | Team Udayavani |

ಕಲಬುರಗಿ: ಯಾವುದೇ ಕ್ಷೇತ್ರದಲ್ಲಿ ವೃತ್ತಿ ನಿಪುಣತೆ ಮುಖ್ಯವಾಗಿದ್ದರಿಂದ ನಿರುದ್ಯೋಗಿಗಳಿಗೆ ವಿವಿಧ ಕೋರ್ಸ್‌ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ- ಜೀವನೋಪಾಯ ಇಲಾಖೆ ಜಿಲ್ಲಾ ನಿರ್ದೇಶಕರಾದ ನಾಗುಬಾಯಿ ದೊಡ್ಡಮನಿ ಹೇಳಿದರು.

Advertisement

ನಗರದ ಬಸವ ಸಿರಿ ತರಬೇತಿ ಕೇಂದ್ರದಲ್ಲಿ 2021-22ನೇ ಸಾಲಿನ ಪ್ರಧಾನ ಮಂತ್ರಿ ವಿಕಾಸ (ಪಿಎಂಕೆವಿವೈ 3.0) ಯೋಜನೆಯಡಿ ಕೌಶಲ್ಯಾಭಿ ವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ ಪಾಯ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಉಚಿತ ಕೋವಿಡ್‌ ಕ್ರಾಸ್‌ ಕೋರ್ಸ್‌ ತರಬೇತಿ ಉದ್ದೇಶಿಸಿ ಅವರು ಮಾತನಾಡಿದರು.

ಹಲವರಲ್ಲಿ ತಮ್ಮದೆ ಪ್ರತಿಭೆ ಹಾಗೂ ಕೌಶಲ್ಯತೆ ಇದ್ದೇ ಇರುತ್ತದೆ. ಅದಕ್ಕೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ದೊರೆತಲ್ಲಿ ಕೌಶಲ್ಯ ಸಮಾಜಕ್ಕೆ ಗೊತ್ತಾಗುತ್ತದೆ. ಇಲಾಖೆ ಯಡಿ ನಿರುದ್ಯೋಗಿಗಳ ಕೌಶಲ್ಯಾ ಭಿವೃದ್ಧಿಗೆ ಕೋರ್ಸುಗಳಿವೆ. ತರಬೇತಿ ಪಡೆಯುವ ಮೂಲಕ ಬದುಕು ರೂಪಿಸುವ ಕೆಲಸ ಇಲಾಖೆಯದ್ದಾಗಿದೆ. ಹೀಗಾಗಿ ಯುವಕರು ಹಾಗೂ ನಿರುದ್ಯೋಗಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಪಿಎಂಕೆವಿವೈ 3.0 ಜಿಲ್ಲಾ ಸಂಯೋಜಕ ಮೌನೇಶ ಹಾಗೂ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ್‌, ಉಪನ್ಯಾಸಕ ಡಾ| ಶರಣಗೌಡ ಪಾಟೀಲ ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next