Advertisement

ಇಂದಿನಿಂದ ರೈಲು ಸಂಚಾರ

09:40 AM May 13, 2020 | Sriram |

ಹೊಸದಿಲ್ಲಿ: ಎರಡು ತಿಂಗಳುಗಳ ಸುದೀರ್ಘ‌ ನಿಲುಗಡೆಯ ಬಳಿಕ ದೇಶದಲ್ಲಿ ಆಯ್ದ ಪ್ರಯಾಣಿಕ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಮಂಗಳವಾರದಿಂದ ಮೊದಲ ಹಂತದಲ್ಲಿ 15 ವಿಶೇಷ ರೈಲುಗಳು ಸಂಚರಿಸಲಿವೆ.

Advertisement

ಪ್ರಯಾಣಿಕರು 90 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣ ತಲುಪಬೇಕಿದೆ. ಸ್ಕ್ರೀನಿಂಗ್‌,ತಪಾಸಣೆ ಮತ್ತಿತರ ಪ್ರಕ್ರಿಯೆಗಳನ್ನು ನಡೆಸುವುದಕ್ಕೆ ಈ ಅವಧಿಯನ್ನು ಬಳಸಿಕೊಳ್ಳಲಾಗುತ್ತದೆ. ದಿಲ್ಲಿಯಿಂದ ಬೆಂಗಳೂರು ಸಹಿತ ದೇಶದ 15 ರಾಜ್ಯ ರಾಜಧಾನಿಗಳಿಗೆ ರೈಲುಗಳು ಸಂಚರಿಸಲಿದ್ದು, ವೇಳಾಪಟ್ಟಿ, ಪ್ರಯಾಣಿಕ ಮಾರ್ಗಸೂಚಿಗಳನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದೆ.

ಪ್ರಯಾಣಿಕರು ಅನುಸರಿಸಬೇಕಾದ್ದೇನು?
-90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಹೋಗಬೇಕು.
-ಸದ್ಯಕ್ಕೆ ತತ್ಕಾಲ್‌, ಪ್ರೀಮಿಯಂ ತತ್ಕಾಲ್‌ ಬುಕ್ಕಿಂಗ್‌ ಇಲ್ಲ
-ಸೂಪರ್‌ ಫಾಸ್ಟ್‌ ರೈಲು ಟಿಕೆಟ್‌ ದರ; ವಿನಾ ಯಿತಿ ಇಲ್ಲ
-ದೃಢೀಕೃತ ಇ-ಟಿಕೆಟ್‌ ಹೊಂದಿದ್ದರೆ ಮಾತ್ರ ರೈಲು ನಿಲ್ದಾಣಕ್ಕೆ ಪ್ರವೇಶ
-ಮಾಸ್ಕ್, ನಿರ್ಗಮನಕ್ಕೆ ಮುನ್ನ ಸ್ಕ್ರೀನಿಂಗ್‌ ಕಡ್ಡಾಯ
-ಹೊದಿಕೆ, ಬೆಡ್‌ ಶೀಟ್‌, ಆಹಾರ ಪ್ರಯಾಣಿಕರೇ ತರಬೇಕು.

ಕರಾವಳಿಗೆ ಒಂದು ರೈಲು
ಮಂಗಳೂರು: ವಿಶೇಷ ರೈಲುಗಳಲ್ಲಿ ಒಂದು ಮಾತ್ರ ಕರಾವಳಿ ಮೂಲಕ ಹಾದು ಹೋಗಲಿದೆ. ಆದರೆ ನಿಲುಗಡೆ ಇರುವುದು ಮಂಗಳೂರಿನಲ್ಲಿ ಮಾತ್ರ. ಹೊಸದಿಲ್ಲಿಯಿಂದ ಮೇ 13ರಂದು ಹೊರಡುವ ರೈಲು ಮೇ 15ರಂದು ತಿರುವನಂತಪುರ ತಲುಪಲಿದೆ. ಇದು ಹೊಸದಿಲ್ಲಿಯಿಂದ ಮಂಗಳವಾರ, ಬುಧವಾರ ಮತ್ತು ರವಿವಾರ ಸಂಚರಿಸಲಿದೆ. ಈ ರೈಲಿಗೆ ಮಂಗಳೂರಿನಲ್ಲಿ ಮಾತ್ರ ನಿಲುಗಡೆ ಇದೆ; ಉಡುಪಿ, ಕಾರವಾರಗಳಲ್ಲಿ ಇದು ನಿಲ್ಲುವುದಿಲ್ಲ.

ಬುಕ್ಕಿಂಗ್‌ಗೆ ಮುಗಿಬಿದ್ದರು!
ಸೋಮವಾರ ಸಂಜೆ 4 ಗಂಟೆಗೆ ಜನರು ಟಿಕೆಟ್‌ ಖರೀದಿಸಲು ಮುಗಿಬಿದ್ದರು. ಇದರಿಂದಾಗಿ ಐಆರ್‌ಸಿಟಿಸಿ ವೆಬ್‌ಸೈಟ್‌ ಕ್ರ್ಯಾಶ್‌ ಆಗಿತ್ತು. ಕೊನೆಗೆ ಬುಕ್ಕಿಂಗ್‌ ಸ್ಥಗಿತಗೊಳಿಸಿ, 6 ಗಂಟೆಯ ಬಳಿಕ ಆರಂಭಿಸಲಾಯಿತು. ವಿಶೇಷ ರೈಲುಗಳಿಗೆ ಸಂಬಂಧಿಸಿದ ಹೊಸ ದತ್ತಾಂಶ ಅಪ್‌ ಲೋಡ್‌ ಪ್ರಕ್ರಿಯೆ ವಿಳಂಬವಾದ ಕಾರಣ ವೆಬ್‌ ಸೈಟ್‌ ಕ್ರ್ಯಾಶ್ ಆಗಿದೆ ಎಂದು ಸಚಿವಾಲಯ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next