Advertisement

ಬೆಂಗಳೂರು ರೈಲುಗಳ ಸಂಚಾರ ರದ್ದು

11:21 PM Aug 10, 2019 | Lakshmi GovindaRaj |

ಹುಬ್ಬಳ್ಳಿ: ನೈಋತ್ಯ ರೈಲ್ವೆ ಮೈಸೂರು ವಲಯದ ಹಾಸನ ಹಾಗೂ ಮಂಗಳೂರು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ನಿಲ್ದಾಣಗಳ ಮಧ್ಯೆ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

Advertisement

ಆ.12, 14, 16, 19, 21, 23ರಂದು ಯಶವಂತಪುರದಿಂದ ತೆರಳಲಿರುವ ಯಶವಂತಪುರ -ಕಾರವಾರ ಎಕ್ಸ್‌ಪ್ರೆಸ್‌ (16515), ಆ.13, 15, 17, 20; 22ರಂದು ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ (16516), ಆ.14, 15, 16, 17, 21, 22ರಂದು ಬೆಂಗಳೂರು-ಕಣ್ಣೂರ/ಕಾರವಾರ ಎಕ್ಸ್‌ಪ್ರೆಸ್‌ (16511/16513), ಆ. 11, 12, 13, 18, 18, 20ರಂದು ಮೈಸೂರು ಮಾರ್ಗವಾಗಿ ಸಂಚರಿಸುವ ಬೆಂಗಳೂರು ನಗರ-ಕಣ್ಣೂರ/ಕಾರವಾರ (16517/16523) ರೈಲು, ಆ.11, 12, 13, 14, 18, 20, 21ರಂದು ಕಣ್ಣೂರ /ಕಾರವಾರ-ಬೆಂಗಳೂರು ನಗರ (16512/16514) ರೈಲು, ಆ.15, 16, 17, 22ರಂದು ಮೈಸೂರು ಮಾರ್ಗವಾಗಿ ಸಾಗುವ ಕಣ್ಣೂರ/ ಕಾರವಾರ-ಬೆಂಗಳೂರು ನಗರ (16518/16524) ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಆ.13, 15, 18, 20, 22ರಂದು ಯಶವಂತಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ (16575), ಆ.12,14, 16, 19, 21, 23ರಂದು ಸಂಚರಿಸುವ ಮಂಗಳೂರು ಜಂಕ್ಷನ್‌-ಯಶವಂತಪುರ (16576) ರೈಲು, ಆ.11, 13, 15, 18, 20, 22ರಂದು ಯಶವಂತಪುರ-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ (16585) ರೈಲು, ಆ.12, 14, 16, 19, 21, 23ರಂದು ಯಶವಂತಪುರ-ಮಂಗಳೂರು ಸೆಂಟ್ರಲ್‌ (16586) ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿದೆ.

ಆ.12ರಂದು ಛತ್ರಪತಿ ಶಿವಾಜಿ ಟರ್ಮಿನಸ್‌-ತ್ರಿವೇಂಡ್ರಂ ಸೆಂಟ್ರಲ್‌ ಎಕ್ಸ್‌ಪ್ರೆಸ್‌ (16331), ದೆಹಲಿ ಸರಾಯ್‌ ರೊಹಿಲಾ-ಯಶವಂತಪುರ ಎಕ್ಸ್‌ಪ್ರೆಸ್‌ (12214) ರೈಲಿನ ಸಂಚಾರ ರದ್ದುಪಡಿಸಲಾಗಿದೆ. ಆ.11ರಂದು ಬಿಕಾನೇರ್‌-ಯಶವಂತಪುರ ಎಕ್ಸ್‌ಪ್ರೆಸ್‌ (16558) ರೈಲು ಸೂರತ್‌, ಜಲಗಾಂವ, ವಾರ್ಧಾ ಬಾಲಹರ್ಷಾಹ್‌, ಸಿಕಂದರಾಬಾದ್‌, ಸುಲೆಹಳ್ಳಿ, ಗುಂತ್ಕಲ್‌, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರ ಮಾರ್ಗವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next