Advertisement

ಮೀನು ಹಿಡಿಯುವ ವೇಳೆ ನೀರುಪಾಲಾದ ವ್ಯಕ್ತಿ: ಘಟನೆ ನೋಡಿ ಹೃದಯಾಘಾತದಿಂದ ವ್ಯಕ್ತಿ ಸಾವು

01:28 PM Jul 07, 2021 | Team Udayavani |

ಕಾವೂರು: ಆವೆ ಮಣ್ಣಿನ ಪಾಯದಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಸುದ್ದಿಯನ್ನು ಕೇಳಿ ಹೃದಯಾಘಾತದಿಂದ ಮತ್ತೊಬ್ಬ ವ್ಯಕ್ತಿಯೂ ಸಾವನ್ನಪ್ಪಿರುವ ದುರಂತ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ  ಮಾಯಿಲಾದಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

ಇದನ್ನೂ ಓದಿ: ಉಳ್ಳಾಲ: ಮನೆಯ ಬಾಗಿಲು ಒಡೆದು ಕಳವಿಗೆ ಯತ್ನಿಸಿದ ಕಳ್ಳರು

ಮೀನು ಹಿಡಿಯಲು ತೆರಳಿದ್ದ ಜೋಕಿಂ ಮಸ್ಕರೇನಸ್ (58) ಮೃತ ದುರ್ದೈವಿ. ಜೋಕಿಂ ಮಸ್ಕರೇನಸ್  ಮಂಗಳವಾರ ಮನೆಯವರ ಜತೆ ಆವೆ ಮಣ್ಣಿನ ಪಾಯದಲ್ಲಿ ಮೀನು ಹಿಡಿಯಲು ತೆರೆಳಿದ್ದರು. ಈ ವೇಳೆ ಕಾಲು ಜಾರಿ ನೀರುಪಾಲಾಗಿ ಮೃತ ಪಟ್ಟಿದ್ದಾರೆ. ಈ ಘಟನೆಯನ್ನು ನೋಡಿದ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಆಘಾತದಿಂದ ಕುಸಿದು ಬಿದ್ದಿದ್ದಾರೆ. ಬಳಿಕ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.

ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next