Advertisement

ವಿಜಯಪುರ: ಪ್ರೇಮಿ ಜೊತೆ ಅಪ್ರಾಪ್ತ ಮಗಳು ಪರಾರಿ; ಮನನೊಂದು ತಂದೆ ಆತ್ಮಹತ್ಯೆ

11:33 AM Oct 04, 2022 | Team Udayavani |

ವಿಜಯಪುರ: ಅಪ್ರಾಪ್ತ ಮಗಳು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದು, ದೂರು ನೀಡಿದರೂ ಪೊಲೀಸರು ಮಗಳನ್ನು ಪತ್ತೆ ಮಾಡುತ್ತಿಲ್ಲ ಎಂದು ನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.

Advertisement

ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಘಟನೆ ಗಂಗಾಧರ ಬಡಿಗೇರ (44) ಆತ್ಮಹತ್ಯೆ ಮಾಡಿಕೊಂಡು ದುರ್ದೈವಿ.

ಗಂಗಾಧರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಾಗಿದ್ದರು. ತಮ್ಮ ಅಪ್ರಾಪ್ತ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ತನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ಗಂಗಾಧರ ಬಸವನಬಾಗೇವಾಡಿ ಪೊಲೀಸರಿಗೆ ದೂರು ನೀಡಿದ್ದರು. ಆದರೂ ಪೊಲೀಸರು ತನ್ನ ಮಗಳನ್ನು ಪತ್ತೆ ಮಾಡಿಲ್ಲವೆಂದು ಮನನೊಂದು ಭೈರವಾಡಗಿ ಹೊರ ವಲಯದಲ್ಲಿರುವಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ವಗ್ರಾಮದ ಯುವಕನೊಂದಿಗೆ ತನ್ನ ಅಪ್ರಾಪ್ತ ಮಗಳು ಮನೆ ಬಿಟ್ಟು ಹೋಗಿದ್ದಳು. ತಾನು ಎಷ್ಟೆಲ್ಲ ಹುಡುಕಿದರೂ ಮಗಳು ಪತ್ತೆ ಆಗಿರಲಿಲ್ಲ. ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ಮಗಳನ್ನು ಹುಡುಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹಲವು ಬಾರಿ ಠಾಣೆಗೆ ತೆರಳಿದಾಗ ಹೀಗಾಗಿ ತನ್ನ ಮಗಳು ಪತ್ತೆ ಆಗುತ್ತಿಲ್ಲ ಎಂದು ಗಂಗಾಧರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಲವಾರು ಬಾರಿ ಠಾಣೆಗೆ ಅಲೆದರೂ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ಅವಮಾನಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಗಾಧರ ಸಾವಿಗೆ ಬಸವನಬಾಗೇವಾಡಿ ಪೊಲೀಸರ ನಿರ್ಲಕ್ಷ್ಯವೇ ಮುಖ್ಯ ಕಾರಣವೆಂದು ಸ್ಥಳಕ್ಕೆ ತೆರಳಿದ್ದ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಎಸ್ಪಿ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next