Advertisement

ವಿಜಯಪುರ : ಸಾಲಬಾಧೆಗೆ ರೈತ ಆತ್ಮಹತ್ಯೆ

10:45 PM Aug 12, 2021 | Suhan S |

ಸಿಂದಗಿ(ವಿಜಯಪುರ): ಸಾಲಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

Advertisement

ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದಲ್ಲಿನ ಹೊಲದಲ್ಲಿದ್ದ ಮರಕ್ಕೆ  ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ರೈತನನ್ನು ಸಿದ್ದಪ್ಪ ಯಲ್ಲಪ್ಪ ಅಲ್ಲಾಪುರ ಉರ್ಫ ಹರಿಜನ (48) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ತಂದೆ, ಪತ್ನಿ, ಮೂರು ಜನ ಗಂಡು ಮಕ್ಕಳನ್ನು ಬಿಟ್ಟು ಅಗಲಿದ್ದಾನೆ.

6 ಎಕರೆ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಾಗಿ ಮಾಡಬಾಳ ಗ್ರಾಮದ ಪಿಕೆಪಿಎಸ್‌ನಲ್ಲಿ 4.03 ಲಕ್ಷ ರೂ. ಮತ್ತು ಮಗನ ಮದುವೆಗೆ ತನ್ನ ಗೆಳೆಯರಲ್ಲಿ ಖಾಸಗಿಯಾಗಿ 2 ಲಕ್ಷ ರೂ.  ಸೇರಿ 6.03.ಲಕ್ಷ ರೂ. ಸಾಲಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next