Advertisement

ಪಡುಬಿದ್ರಿ: ಮಗುಚಿ ಬಿದ್ದ ಟಿಪ್ಪರ್ ; ಸ್ಥಳದಲ್ಲೇ ಸಾವನ್ನಪ್ಪಿದ ಚಾಲಕ

03:50 PM Jun 06, 2021 | Team Udayavani |

ಪಡುಬಿದ್ರಿ: ಚಾಲಕನ ಮೇಲೆ ಟಿಪ್ಪರ್ ಬಿದ್ದು ಸಾವನ್ನಪ್ಪಿದ ಘಟನೆ ನಂದಿಕೂರು ಬಳಿ ರವಿವಾರ ಮುಂಜಾನೆ ನಡೆದಿದೆ.

Advertisement

ಹರೀಶ್ ಕೋಟ್ಯಾನ್ (37) ಮೃತ ವ್ಯಕ್ತಿ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಸೇರಿದ  ಇಂಡಸ್ಟ್ರಿಯಲ್ ಎಸ್ಟೇಟ್ ಸೈಟಲ್ಲಿ ಹರೀಶ್ ರವಿವಾರ ಬೆಳಗ್ಗೆ 10:30 ರ ಸುಮಾರಿಗೆ ಮಣ್ಣು ತುಂಬಿದ್ದ ಟಿಪ್ಪರ್ ನ ಹೈಡ್ರಾಲಿಕ್ ಜಾಕನ್ನು ಏರಿಸಿದಾಗಲೂ ಒದ್ದೆ ಮಣ್ಣು ಬೀಳದೆ ಇದ್ದಾಗ ಟಿಪ್ಪರನ್ನು ಚಾಲೂ ಸ್ಥಿತಿಯಲ್ಲಿರಿಸಿ ಹಿಂಬದಿ ಬೋಲ್ಟ್ ಸರಿಸಲು ಚಾಲಕ ಹರೀಶ್  ಬಂದಾಗ ಟಿಪ್ಪರ್ ಮಗುಚಿ ಆತನ ಮೇಲೆಯೇ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:  ಬರುವ ದಿನಗಳಲ್ಲಿ ಯಡಿಯೂರಪ್ಪ ಅವರದ್ದೇ ಶ್ರೀರಕ್ಷೆ ಇರಲಿದೆ : ಬೊಮ್ಮಾಯಿ

ಹರೀಶ್ ತಂದೆ, ತಾಯಿ, ಪತ್ನಿ ಹಾಗೂ ಏಕಮಾತ್ರ ಪುತ್ರಿಯನ್ನು ಅಗಲಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next