Advertisement

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

07:01 PM Sep 27, 2022 | Team Udayavani |

ಮಧುಗಿರಿ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ತಲೆ ಮೇಲೆ ಆಟೋ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Advertisement

ಪಟ್ಟಣದ ಶಾಲರಯೊಂದರ ಕುಶಾಲ್ (9) ಮೃತಪಟ್ಟ ಬಾಲಕ.

ಘಟನೆಯ ವಿವರ:

ಬಾಲಕ ಕುಶಾಲ್ ಬೆಂಕಿಪುರದ ಅಶ್ವತ್ಥ್ ಎಂಬುವವರ ಪುತ್ರನಾಗಿದ್ದು ನಗರದ ಶಾಲೆವೊಂದರಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದ. ಸಂಜೆ ಮನೆಗೆ ಮರಳುವಾಗ ಆಟೋದಲ್ಲಿ ಬರುವಾಗ ಆಟೋ ಮುಂದೆ ಕುಳಿತಿದ್ದವನು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು ಅದೇ ಆಟೋದ ಹಿಂಬದಿಯ ಚಕ್ರ ತಲೆ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸುರಕ್ಷತೆಯಿಲ್ಲದೆ ಸಂಚಾರ :

Advertisement

ಪಟ್ಟಣದಲ್ಲಿ ಖಾಸಗಿ ಶಾಲೆಗಳು ತಮ್ಮ ವಾಹನಗಳಲ್ಲಿ ಮಕ್ಕಳನ್ನು ಕರೆತರಲು ಹೆಚ್ಚು ಶುಲ್ಕ ವಿಧಿಸಿದ ಕಾರಣ ಬಡ ಪೋಷಕರು ಇಂತಹ ಆಟೋವನ್ನು ಅವಲಂಬಿಸುವುದು ಸಾಮಾನ್ಯವಾಗಿದೆ. ಇದರಲ್ಲಿ ತಿಂಗಳಿಗೆ 700 ರೂ.ಗಳಿದ್ದು ಶಾಲಾ ವಾಹನದಲ್ಲಿ 6-7 ಸಾವಿರವಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು ಒಂದೇ ಬಾರಿ 10-15 ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ. ಇಂತಹ ಆಟೋಗಳ ಬಗ್ಗೆ ಪೊಲೀಸರು, ಸಾರಿಗೆ ಇಲಾಖೆಯವರು ಕಂಡೂ ಕಾಣದಂತಿರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ ಎಂಬುದು ಜನರ ಆರೋಪ.

ಘಟನೆ ಸಂಬಂಧಿಸಿ ಆಟೋ ಚಾಲಕನನ್ನು ಬಂಧಿಸಿದ್ದು, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next