Advertisement

ವಯೋವೃಧ್ದೆಯ ಮೃತ ದೇಹವನ್ನು ಎಳೆದಾಡಿ ತಿಂದು ಹಾಕಿದ ನಾಯಿಗಳು.!

10:11 PM Apr 29, 2021 | Team Udayavani |

ಕುಷ್ಟಗಿ : ಮೃತ ವಯೋವೃಧ್ದೆ ದೇಹವನ್ನು ನಾಯಿಗಳು ಎಳೆದಾಡಿ ತಿಂದು ಹಾಕಿರುವ ಪ್ರಕರಣ ಕುಷ್ಟಗಿಯಲ್ಲಿ ನಡೆದಿದೆ.

Advertisement

ಹನಮವ್ವ ಈರಪ್ಪ ತೆಗ್ಗಿಹಾಳ (80) ಎಂದು ಗುರುತಿಸಲಾಗಿದ್ದು, ವೃಧ್ಧೆ ಹನಮವ್ವ ಜೋಗಮ್ಮ ಎಂದು ಗುರುತಿಸಲಾಗಿದೆ.

ಕುಷ್ಟಗಿ ಹೊರವಲಯದ 15ನೇ ವಾರ್ಡ ವ್ಯಾಪ್ತಿಯ ಹನುಮಸಾಗರ ರಸ್ತೆಯ ಸಾಯಿ ನಗರದಲ್ಲಿ ವೃದ್ದೆ ವಾಸವಾಗಿದ್ದಳು. ಸಾಯಿ ನಗರದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು. ಕಳೆದ ಬುಧವಾರ ಮಧ್ಯಾಹ್ನ ಉರುವಲು ಕಟ್ಟಿಗೆ ಆರಿಸಲು ಹೋಗಿದ್ದಾಗ ಸಾವು ಸಂಭವಿಸಿದ್ದು, ಮೃತ ದೇಹವನ್ನು ನಾಯಿಗಳು ಎಳೆದಾಡಿ ಕೈ ಹಾಗೂ ತಲೆ ಭಾಗವನ್ನು ತಿಂದು ಹಾಕುತ್ತಿದ್ದಾಗ ನಾಯಿಗಳನ್ನು ಹೊಲದ ಮಾಲಿಕ ಓಡಿಸಿದ್ದು, ಸದರಿ ವಿಷಯ ಸ್ಥಳೀಯರ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು ಸಹಜ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next