Advertisement

ಎತ್ತು ತೊಳೆಯುವ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಯುವಕ ಸಾವು

08:04 PM Apr 03, 2022 | Team Udayavani |

ಕುಷ್ಟಗಿ: ಎತ್ತು ತೊಳೆಯಲು ಹೋಗಿದ್ದ ವೇಳೆ ಯುವಕನೋರ್ವ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಲಿಯಾಪೂರ ಕೆರೆಯಲ್ಲಿ ನಡೆದಿದೆ.

Advertisement

ಬಸವರಾಜ್ ನಾಗಪ್ಪ ಮಸ್ಕಿ‌ (25) ಮೃತ ಯುವಕ ದುರ್ದೈವಿ.

ಚಾಲಕನಾಗಿದ್ದ ಈತ ಹುಲಿಯಾಪೂರ ಕೆರೆಯಲ್ಲಿ ಎತ್ತು  ತೊಳೆಯಲು ಹೋದಾಗ ಆಕಸ್ಮಿಕ ‌ಕಾಲು ಜಾರಿ ಮುಳುಗಿದ್ದಾನೆ. ಊರಲ್ಲಿ ‌ಯುಗಾದಿ‌ ಮಾರನೇ ದಿನ ಬಣ್ಣದ ಓಕುಳಿಯಲ್ಲಿ‌ಭಾಗವಹಿಸಿದ್ದ ಯುವಕರು ಮುಳುಗುತ್ತಿದ್ದವನನ್ನು ರಕ್ಷಿಸಿಸಲು ಮುಂದಾಗಿದ್ದರೂ ಫಲಿಸಲಿಲ್ಲ. ಮುಳುಗಿದ್ದ ಯುವಕ ಬಸವರಾಜ್ ನ ಶವ ಹೊರಗೆ ತೆಗೆದಿದ್ದಾರೆ.

ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next