Advertisement

ಹುಣಸೂರು: ರೈಲ್ವೆ ಹಳಿ ಗೇಟ್ ಬಿದ್ದು ತೀವ್ರ ಗಾಯಗೊಂಡಿದ್ದ ವಾಚರ್ ಸಾವು

02:29 PM Feb 10, 2022 | Team Udayavani |

ಹುಣಸೂರು: ರೈಲ್ವೆ ಹಳಿ ಗೇಟ್ ಬಿದ್ದು ತೀವ್ರ ಗಾಯಗೊಂಡಿದ್ದ ವಾಚರ್ ವೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಳವಿಗೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ ಅರಣ್ಯ ವಲಯದ ವನ್ಯಜೀವಿ ಪರಿಪಾಲಕ ಮಹಾದೇವಪ್ಪ ( 58) ಮೃತಪಟ್ಟ ದುರ್ದೈವಿ.

ಮಹದೇವಪ್ಪನವರು ಬುಧವಾರ ಸಂಜೆ  ಅರಣ್ಯದೊಳಗೆ ಬೆಂಕಿ ತಡೆ ಲೈನ್ ಮಾಡಲು ಬಂದಿದ್ದ ಕೊಳವಿಗೆ ಹಾಡಿಯ ಕಾರ್ಮಿಕರನ್ನು ವಾಪಸ್ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಯಲ್ಲಿ ಇಲಾಖೆ ವಾಹನದಲ್ಲಿ ಬಂದು ಕೊಳವಿಗೆ ಕ್ಯಾಂಪಿನ ಹತ್ತಿರ ಆನೆ ತಡೆಗೆ  ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಗೇಟ್ ಅನ್ನು ತೆಗೆದು ಕಾರ್ಮಿಕರು ಇದ್ದ ಅರಣ್ಯ ಇಲಾಖೆಯ ವಾಹನವನ್ನು ಅರಣ್ಯದಿಂದ ಹೊರ  ಬಿಡುವ  ವೇಳೆ  ಗೇಟ್ ಅವರ ಮೇಲೆ ಆಯತಪ್ಪಿ ಬಿದ್ದು . ಗಾಯಗೊಂಡಿದ್ದ ವಾಚರ್ ಮಹದೇವಪ್ಪರನ್ನು  ಚಿಕಿತ್ಸೆಗಾಗಿ ಹನಗೋಡಿನ ಸರ್ಕಾರಿ ಆಸ್ಪತ್ರೆಗೆ ತರುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ .

ಮೃತದೇಹವನ್ನು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ  ಸ್ವಗ್ರಾಮ ಹೆಚ್ ಡಿ ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next