Advertisement

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

08:20 PM Oct 28, 2021 | Team Udayavani |

ಚಿಕ್ಕಮಗಳೂರು: ತಂದೆಯೇ ಮಗಳನ್ನು ಹತ್ಯೆ ಮಾಡಿರುವ ಘಟನೆ ಬೀರೂರು ಪಟ್ಟಣದ ಬಿ.ಎಚ್.ರಸ್ತೆಯ ರೈಲ್ವೇಗೇಟ್ ಬಳಿ ನಡೆದಿದ್ದು ಬುಧವಾರ ರಾತ್ರಿ ಕೊಲೆ ನಡೆದಿದ್ದು, ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ.

Advertisement

ರಾಧ (18) ಮೃತಪಟ್ಟ ದುರ್ದೈವಿಯಾಗಿದ್ದು, ಶಿಕಾರಿಪುರದ ಕೆಂಚಿನಕೊಪ್ಪ ಗ್ರಾಮದ ಚಂದ್ರಪ್ಪ ಮಗಳನ್ನು ಕೊಂದ ಆರೋಪಿಯಾಗಿದ್ದಾನೆ. ಚಂದ್ರಪ್ಪ ಅವರ ಮಗಳು ರಾಧ ಅದೇ ಊರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ಪ್ರೀತಿ ಮನೆಯವರಿಗೆ ಇಷ್ಟವಿಲ್ಲ ದ ಕಾರಣದಿಂದ ಯುವಕನಿಂದ ದೂರವಿರುವಂತೆ ಮಗಳಿಗೆ ಚಂದ್ರಪ್ಪ ಎಚ್ಚರಿಸಿದ್ದರು.

ಆದರೂ ರಾಧ ತಮ್ಮ ಪ್ರೇಮವನ್ನು ಮುಂದೂವರೆಸಿದ್ದು, ಅದೇ ಯುವಕನನ್ನು ಮದುವೆ ಯಾಗುವುದಾಗಿ ಹಠ ಹಿಡಿದಿದ್ದಾಳೆ. ಸ್ವಲ್ಪದಿನ ಯುವಕನಿಂದ ದೂರ ಉಳಿದರೆ ಮರೆಯ ಬಹುದು ಎಂದು ಭಾವಿಸಿ ಚಂದ್ರಪ್ಪ ಮಗಳನ್ನು ಚನ್ನಗಿರಿಯ ಆತನ ಅಕ್ಕನ ಮನೆಯಲ್ಲಿ ರಾಧ ಳನ್ನು ಬಿಟ್ಟಿದ್ದ. ಊರಿನಲ್ಲಿ ಹಬ್ಬವಿದ್ದ ಕಾರಣ ಬುಧವಾರ ಬೈಕ್‍ನಲ್ಲಿ ಮಗಳನ್ನು ಕರೆಕೊಂಡು ಹೋಗಲು ಚನ್ನಗಿರಿಗೆ ಬಂದಿದ್ದು ಮಗಳನ್ನು ಕರೆದುಕೊಂಡು ಹೋಗುವಾಗ ಮಗಳಿಗೆ ಬುದ್ಧಿಮಾತು ಹೇಳಿದ್ದಾನೆ.

ತಂದೆಯ ಮಾತಿಗೆ ಒಪ್ಪದ ರಾಧ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವು ದಾಗಿ ಹಠ ಹಿಡಿದಿದ್ದಾಳೆ. ಇದರಿಂದ ಸಿಟ್ಟುಗೊಂಡ ಚಂದ್ರಪ್ಪ ಬೀರೂರು ಮಾರ್ಗವಾಗಿ ಬಂದು ಪಟ್ಟಣದ ಹೊರವಲಯದ ರೈಲ್ವೇಗೇಟ್ ಬಳಿ ಜನಸಂಚಾರವಿಲ್ಲದನ್ನು ಗಮನಿಸಿ ಮಗಳು ರಾಧ ಧರಿಸಿದ್ದ ಚೂಡಿದಾರ್‍ನ ವೇಲ್‍ನಿಂದ ಕುತ್ತಿಗೆ ಬಿಗಿದು ಸಾಯಿಸಿದ್ದಾನೆ.

ರಾಧ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಮೃತಪಟ್ಟಿರುವುದನ್ನು ಖಾತ್ರಿಪಡಿಸಿಕೊಂಡ ಚಂದ್ರ ಪ್ಪ, ಅಲ್ಲೇ ಸಮೀಪದಲ್ಲಿ ಟ್ರಾಕ್ಟರ್ ಚಲಿಸಿ ಹೊಂಡ ಬಿದಿದ್ದ ಗುಂಡಿಯಲ್ಲಿ ರಾಧಳ ಮೃತ ದೇಹ ಇರಿಸಿ ಶಿಕಾರಿಪುರದ ಕೆಂಚಿನಕೊಪ್ಪ ಗ್ರಾಮಕ್ಕೆ ತೆರಳಿದ್ದಾನೆ. ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಕುಟುಂಬದವರು ಚಂದ್ರಪ್ಪನನ್ನು ರಕ್ಷಿಸಿದ್ದಾರೆ.

Advertisement

ತಕ್ಷಣ ಕುಟುಂಬಸ್ಥರು ಚಂದ್ರಪ್ಪ ಅವರನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲಿನ ಪೊಲೀಸರು ಬೀರೂರು ಪೊಲೀಸರಿಗೆ ವಿಷಯ ತಿಳಿ ಸಿದ್ದು, ಪೊಲೀಸರು ಪರಿಶೀಲಿಸಿದಾಗ ಯುವತಿಯ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಿದ ಆರೋಪಿ ಚಂದ್ರಪ್ಪನನ್ನು ಬೀರೂರು ಪೊಲೀಸ್ ಠಾಣೆಗೆ ಕರೆತಂದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next