Advertisement

ಬೀದರ್: ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

07:48 PM Sep 26, 2022 | Team Udayavani |

ಬೀದರ್: ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿರುವ ಹೃದಯವಿದ್ರಾಹಕ ಘಟನೆ ಸೋಮವಾರ ತಾಲೂಕಿನ ಕಂಗಟಿ ಗ್ರಾಮದಲ್ಲಿ ನಡೆದಿದೆ.

Advertisement

ದಸರಾ ಹಬ್ಬದ ನಿಮಿತ್ಯ ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸುನೀತಾ (35), ಆನಂದಿ (30) ಹಾಗೂ ಇವರ ಮಕ್ಕಳಾದ ನಾಗೇಶ (9) ಪ್ರಜ್ವಲ್ (8) ಸಾವನ್ನಪ್ಪಿದ್ದಾರೆ. ಸುನೀತಾ ಮತ್ತು ಆನಂದಿ ಇಬ್ಬರು ಸಹೋದರಿಯರಾಗಿದ್ದು, ಕರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಇಬ್ಬರು ಮಕ್ಕಳು ಈಜಾಡಲು ಹೋಗಿ ಸಿಲುಕಿಕೊಂಡಿದ್ದಾರೆ.

ಇವರನ್ನು ರಕ್ಷಿಸಲು ಹೋದ ತಾಯಂದಿರು ಸಹ ಕೊಚ್ಚಿಕೊಂಡು ಹೋಗಿದ್ದಾರೆ.

ಸ್ಥಳಕ್ಕೆ ಜನವಾಡ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next