Advertisement

ದಾಳಿಗೆ ಹೋದ ತಹಶೀಲ್ದಾರ್‌ಗೆ ಮರಳು ತುಂಬಿದ್ದ ಟ್ರ್ಯಾಕ್ಟರ್‌ ಢಿಕ್ಕಿ

05:05 AM Jul 19, 2017 | Team Udayavani |

ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹುಲಿಗೊಪ್ಪ ಗ್ರಾಮದ ಹತ್ತಿರ ಮಲಪ್ರಭಾ ನದಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಶೀಲ್ದಾರ್‌ ರಾಮಚಂದ್ರ ಕಟ್ಟಿ ಅವರ ಜೀಪಿಗೆ ಮರಳು ತುಂಬಿದ್ದ ಟ್ರ್ಯಾಕ್ಟರ್‌ ಢಿಕ್ಕಿ ಹೊಡೆದಿದ್ದು, ತಹಶೀಲ್ದಾರ್‌ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ದಾಳಿ ನಡೆಸಿದ್ದರು. ಮರಳು ತುಂಬಿದ ಟ್ರ್ಯಾಕ್ಟರನ್ನು ತಹಶೀಲ್ದಾರ್‌ ಅಡ್ಡಗಟ್ಟಿದಾಗ ಹೆದರಿದ ಚಾಲಕ ಮತ್ತು ಸಂಗಡಿಗರು ಭಯಗೊಂಡು ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಜಿಗಿದು ಪರಾರಿಯಾಗಿದ್ದಾರೆ. ತಹಶೀಲ್ದಾರ್‌ಗೆ ಢಿಕ್ಕಿ ಹೊಡೆದ ಟ್ರ್ಯಾಕ್ಟರ್‌ ಸ್ವಲ್ಪ ದೂರದಲ್ಲಿ ಮಗುಚಿದೆ. ತಹಶೀಲ್ದಾರ್‌ಗೆ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ತಹಶೀಲ್ದಾರ್‌ ರಾಮಚಂದ್ರ ಕಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next