Advertisement

ತಾಪಂಗೆ ಸೈಕಲ್‌ನಲ್ಲಿ ಉಪಾಧ್ಯಕ್ಷ

04:39 PM Feb 10, 2021 | Team Udayavani |

ಸಾಗರ: ತಾಪಂ ಉಪಾಧ್ಯಕ್ಷ ಅಶೋಕ್‌ ಬರದವಳ್ಳಿ ತಮ್ಮ ಗ್ರಾಮದಿಂದ 9 ಕಿಮೀ ದೂರದ ತಾಪಂ ಕಚೇರಿಗೆ ಸೈಕಲ್‌ ಸವಾರಿ ಮೂಲಕ ಆಗಮಿಸಿ ಪೆಟ್ರೋಲ್‌- ಡೀಸೆಲ್‌ ದರ ಏರಿಕೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

Advertisement

ಮಂಗಳವಾರ ತಾಪಂ ಕಚೇರಿ ಎದುರು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದಿನೇ ದಿನೇ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರುತ್ತಲೇ ಇದೆ. ಕೂಲಿ ನಾಲಿ ಮಾಡಿ ಬದುಕುವ ಮತ್ತು ಕೆಳ ಮಧ್ಯಮ ವರ್ಗಕ್ಕೆ ಇದು ಭಾರಿ ಹೊರೆಯಾಗುತ್ತಿದೆ. ಜನರ ಆಕ್ರೋಶದ ನಡುವೆಯೂ ಕೇಂದ್ರ ಸರ್ಕಾರ ಅದಾನಿ ಅಂಬಾನಿ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದೆ. ದೇಶ ಅಂದರೆ ಪ್ರಧಾನಿ, ಅದಾನಿ,  ಅಂಬಾನಿಯಂತಾಗಿದೆ. ಹೀಗಾಗಿ ವಿದ್ಯಾರ್ಥಿ ಯುವಜನರು ಮತ್ತು ಇತರ ನಾಗರಿಕರು ಸೈಕಲ್‌ ಅನ್ನು ಹೆಚ್ಚಾಗಿ ಬಳಸಿ ಬೆಲೆ ಏರಿಕೆ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಬೇಕು ಎಂದರು.

ಇದನ್ನೂ ಓದಿ :ಹಳ್ಳಿ ಪ್ರತಿ ಮನೆಗೂ ಶುದ್ಧ ಜಲ

ಪ್ರಧಾನಿ ಕೋವಿಡ್‌ ಓಡಿಸಲು ದೀಪ ಹಚ್ಚಿ, ಜಾಗಟೆ ಬಾರಿಸಿ ಎಂದು ಕರೆ ಕೊಟ್ಟ ಹಾಗೆ ದೇಶದ ಜನತೆಗೆ ನಿತ್ಯವು ಸೈಕಲ್‌ ಬಳಸಿ ಎಂದು ಕರೆಕೊಡಬೇಕು ಎಂದು ಸಲಹೆ ನೀಡಿದರು.

ಸೈಕಲ್‌ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಭೂಮಿ ಮೇಲೆ ಇರುವ ಸಕಲ ಜೀವಿಗಳ ಆರೋಗ್ಯ ಸುಧಾರಿಸುವುದು ಅಲ್ಲದೆ ಆರ್ಥಿಕ ಹೊರೆಯು ತಪ್ಪುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next