Advertisement

ಅಬ್ಬಾ….ಕಾವೇರಿಯಲ್ಲಿ ಜಲಕ್ರೀಡೆಗಿಳಿದ 10 ಮಂದಿ ಸೇಫ್!

01:59 PM Jul 26, 2017 | |

ಕೊಳ್ಳೆಗಾಲ: ಇಲ್ಲಿನ ಸತ್ತೆಗಾಲದಲ್ಲಿ ಕಾವೇರಿ ನದಿಯಲ್ಲಿ ನೀರಾಟಕ್ಕಿಳಿದು ಪ್ರಾಣಾಪಾಯಕ್ಕೆ ಸಿಲುಕಿದ್ದ 10 ಮಂದಿ ಪ್ರವಾಸಿಗರನ್ನು ಸ್ಥಳೀಯರು ಸಾಹಸ ಮೆರೆದು ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ. 

Advertisement

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಮುನ್ಸೂಚನೆ ಇಲ್ಲದೆ ನೀರು ಹರಿಯ ಬಿಟ್ಟ ಕಾರಣ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾದ ಕಾರಣ ಮೈಮರೆತಿದ್ದ ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದಾರೆ.

ಒಮ್ಮೆಲೆ ಪ್ರವಾಹದೋಪಾದಿಯಲ್ಲಿ ನೀರು ಬಂದ ಕಾರಣ ಬೆದರಿದ ಮಹಿಳೆಯರು ಸೇರಿದಂತೆ 10 ಮಂದಿ ಪ್ರವಾಸಿಗರು ಎತ್ತರದ ಬಂಡೆಗಳನ್ನೇರಿ ಸಹಾಯ ಯಾಚಿಸಿದ್ದಾರೆ. 

ಸಕಾಲಿಕ ನೆರವು ನೀಡಿದ ಸ್ಥಳೀಯರು ಏಣಿಯೊಂದರ ಸಹಾಯದಿಂದ ಪ್ರವಾಸಿಗರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next