Advertisement

ಮಲ್ಪೆ, ಮರವಂತೆ, ಕೊಲ್ಲೂರು ಇನ್ಮುಂದೆ ಪ್ರವಾಸಿ ತಾಣಗಳು

06:53 AM Dec 15, 2018 | |

ವಿಧಾನಸಭೆ: ಉಡುಪಿ ಜಿಲ್ಲೆಯ ಉಡುಪಿ, ಮಲ್ಪೆ, ಸೇಂಟ್‌ ಮೇರಿಸ್‌ ಐಲ್ಯಾಂಡ್‌, ಕಾಪು, ಕೂಡ್ಲು ತೀರ್ಥ, ಕಾರ್ಕಳ, ಕುಂದಾಪುರ, ಮರವಂತೆ, ಕೊಲ್ಲೂರು, ಆನೆಜರಿಗಳ ನ್ನು ಪ್ರವಾಸಿ ತಾಣಗಳು ಎಂದು ಘೋಷಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಘುಪತಿ ಭಟ್‌ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ 19.83 ಕೋಟಿ ರೂ. ಅನುದಾನ ನಿಗದಿಪಡಿಸಿ ಇದುವರೆಗೂ 4.51 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಕಡಲ ತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕಾಯಂ ನಿರ್ಮಾಣದ ಪ್ರವಾಸಿ ಸೌಲಭ್ಯ ಕಲ್ಪಿಸಲು ಸಿಆರ್‌ಝಡ್‌ ನಿಯಮಗಳ ಪ್ರಕಾರ ಅವಕಾಶ ಇರುವುದಿಲ್ಲ. ಹೀಗಾಗಿ
ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ತನ್ನ ಇತಿಮಿತಿಯಲ್ಲಿ ಕಡಲತೀರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಶೌಚಾಲಯ, ವಾಹನ ನಿಲುಗಡೆ, ವೀಕ್ಷಣಾ ಗೋಪುರ ಸೌಲಭ್ಯ
ಒದಗಿಸುತ್ತಿದೆ ಎಂದು ತಿಳಿಸಿದರು. 

20 ತಾಣ ಆಯ್ಕೆ: ರಾಜ್ಯದಲ್ಲಿ ಸಮಗ್ರವಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು 20 ಪರಂಪರಾ ಪ್ರವಾಸಿ ತಾಣ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಾಣಗಳಲ್ಲಿ ಸ್ಮಾರಕಗಳ ಸಂರಕ್ಷಣೆ ಒಳಗೊಂಡಂತೆ ಸಮಗ್ರ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ. ರಾ.ಮಹೇಶ್‌ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎನ್‌.ಎ.ಹ್ಯಾರೀಸ್‌ ಪ್ರಶ್ನೆಗೆ ಉತ್ತರಿಸಿರುವ ಅವರು, ಬೀದರ್‌ ಕೋಟೆ, ಕಲಬುರಗಿ ಕೋಟೆ, ಮಳಖೇಡ ಕೋಟೆ, ಗೋಲ್‌ಗ‌ುಂಬಜ್‌, ಬಾದಾಮಿ, ಐಹೊಳೆ,
ಪಟ್ಟದಕಲ್ಲು, ಹಂಪಿ, ಆನೆಗೊಂದಿ, ನಂದಿಬೆಟ್ಟ, ಶ್ರೀರಂಗಪಟ್ಟಣ ಕೋಟೆ, ಮೈಸೂರು ಚಾಮುಂಡಿಬೆಟ್ಟ, ಮೇಲುಕೋಟೆ, ಶ್ರವಣಬೆಳಗೊಳ, ಬೇಲೂರು-ಹಳೇ ಬೀಡು, ಚೌಡದಾನಾಪುರ, ದೇವನಹಳ್ಳಿ ಕೋಟೆ, ಮಾಗಡಿ, ಬನವಾಸಿ, ಲಕ್ಕುಂಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next