Advertisement

ಮಂಗಳೂರಿನಲ್ಲಿ ಧಾರಾಕಾರ ಮಳೆ: ಮನೆ ಜಲಾವೃತ

11:26 PM Aug 26, 2019 | Team Udayavani |

ಮಂಗಳೂರು: ನಗರದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಮೂರು ತಾಸು ಸುರಿದ ಭಾರೀ ಮಳೆಯಿಂದಾಗಿ ವಿವಿಧ ಭಾಗಗಳಲ್ಲಿ ಕೃತಕ ನೆರೆ ಉಂಟಾಯಿತು. ಸುಮಾರು 25ಕ್ಕೂ ಅಧಿಕ ಮನೆ, ಅಂಗಡಿ, ಕಟ್ಟಡಗಳು ಜಲಾವೃತ ಗೊಂಡವು. ಬಹುತೇಕ ರಸ್ತೆಗಳಲ್ಲಿ ನೆರೆನೀರು ಉಕ್ಕಿ ಹರಿದು ವಾಹನ ಸವಾರರು-ಪಾದಚಾರಿಗಳು ಕೆಲವು ತಾಸು ಪರದಾಡುವಂತಾಯಿತು.

Advertisement

ಭಗವತೀನಗರ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಮಳೆನೀರು ನುಗ್ಗಿ ಸಮಸ್ಯೆ ಎದುರಾಯಿತು. ಮಳೆ ಜೋರಾಗುತ್ತಿರು ವುದನ್ನು ಮನಗಂಡ ನಗರದ ಕೆಲವು ಶಾಲೆಗಳು ಮಧ್ಯಾಹ್ನವೇ ರಜೆ ಘೋಷಿಸಿದವು. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಸೋಮವಾರ ಆರೆಂಜ್‌ ಅಲರ್ಟ್‌ ಘೋಷಿಸಿತ್ತು. ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next