Advertisement

ನಗರದಲ್ಲಿ ಧಾರಾಕಾರ ಮಳೆ

05:24 AM Jun 07, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದು, 16ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಶನಿವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಸಂಜೆ 6 ಗಂಟೆಯವರೆಗೆ ನಗರದ ಹಲವೆಡೆ ಸುರಿಯಿತು. ಕತ್ರಿಗುಪ್ಪೆ, ನ್ಯಾಷನಲ್‌  ಕಾಲೇಜು, ಜಯನಗರ 7ನೇ ಹಂತ, ಎಂಸಿ ಲೇಔಟ್‌, ಜೆ.ಪಿ.ನಗರ ಮೊದಲ ಹಂತ, ಮೂಡಲಪಾಳ್ಯದ ಪಂಚಶೀಲ ನಗರ ಹಾಗೂ ಹೊಸಕೆರೆಹಳ್ಳಿ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿವೆ.

Advertisement

ರಾಜರಾಜೇಶ್ವರಿ ನಗರದ ಗ್ರೂಪ್‌ ಡಿ  ಲೇಔಟ್‌ನಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಜಲಾವೃತ್ತವಾಯಿತು. ಎನ್‌ಜಿಎಫ್ನ ಅಪಾರ್ಟ್‌ಮೆಂಟ್‌ ಗೂ ಮಳೆ ನೀರು ನುಗ್ಗಿದ ಹಿನ್ನೆಲೆ  ಯಲ್ಲಿ ಸಾರ್ವಜನಿಕರು ಪರದಾಡುವಂತಾಯಿತು. ಅದೇ ರೀತಿ ಜ್ಞಾನ  ಭಾರತಿ ವಾರ್ಡ್‌ನಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಯ ಸಿಬ್ಬಂದಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ?: ಕೆಂಗೇರಿ 73 ಮಿ.ಮೀ, ಸಿಂಗಸಂದ್ರ 58 ಮಿ.ಮೀ, ಮಾರುತಿ ಮಂದಿರ 56 ಮಿ.ಮೀ, ಹಂಪಿನಗರ 53 ಮಿ.ಮೀ, ಬೇಗೂರು 50ಮಿ.ಮೀ, ನಾಗರಬಾವಿ 48.5 ಮಿ.ಮೀ, ಅಗ್ರಹಾರ ಮತ್ತು ದಾಸರಹಳ್ಳಿ 46.5 ಮಿ.ಮೀ, ಕೋರ ಮಂಗಲ 43 ಮಿ.ಮೀ, ಬಸವನನಗರ 43 ಮಿ.ಮೀ, ರಾಜರಾಜೇಶ್ವರಿ ನಗರ  41 ಮಿ.ಮೀ, ಗಾಯಿತ್ರಿ ನಗರ 38 ಮಿ.ಮೀ, ಕೊಟ್ಟಿಗೆಪಾಳ್ಯ 34 ಮಿ.ಮೀ, ಅರಕೆರೆ 32.5 ಮಿ.ಮೀ, ಬಿಳೆಕ್ಕಹಳ್ಳಿ 28.5 ಮಿ.ಮೀ, ಸಾರಕ್ಕಿ 29.5 ಮಿ.ಮೀ, ಬೊಮ್ಮನಹಳ್ಳಿ 27.5 ಮಿ.ಮೀ, ಕುಮಾರಸ್ವಾಮಿ ಲೇಔಟ್‌ 26 ಮಿ.ಮೀ,  ಚಾಮರಾಜಪೇಟೆ 21.5 ಮಿ.ಮೀ, ನಾಗಾಪುರ 19 ಮಿ.ಮೀ, ಉತ್ತರಹಳ್ಳಿ 19 ಮಿ.ಮೀ, ಕೋಣನಕುಂಟೆ 18 ಮಿ.ಮೀ ಸೇರಿದಂತೆ ಇತರೆಡೆ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next