Advertisement

ತಿತ್ಲಿಯನ್ನೂ ಮೀರಿಸಲಿದೆ ಫೋನಿ?

02:58 AM May 02, 2019 | Team Udayavani |

ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ “ಫೋನಿ’ ಚಂಡಮಾರುತವು ಪೂರ್ವ ಕರಾವಳಿಯತ್ತ ಚಲಿಸುತ್ತಿದ್ದು, ಶುಕ್ರವಾರ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಪುರಿಯ ದಕ್ಷಿಣ ಭಾಗದಲ್ಲಿರುವ ಗೋಪಾಲಪುರ ಮತ್ತು ಚಾಂದ್‌ಬಾಲಿ ನಡುವಿನ ಪ್ರದೇಶದಲ್ಲಿ ಗಂಟೆಗೆ 210 ಕಿ.ಮೀ. ವೇಗದಲ್ಲಿ ಫೋನಿ ಸಾಗುತ್ತಿದ್ದು, ದಡಕ್ಕೆ ಅಪ್ಪಳಿಸುವಾಗ ಇದರ ವೇಗ ಗಂಟೆಗೆ 205 ಕಿ.ಮೀ. ಇರುವ ಸಾಧ್ಯತೆಯಿದೆ.

ಕಳೆದ ವರ್ಷ ಒಡಿಶಾ- ಆಂಧ್ರ ಕರಾವಳಿಗೆ ಅಪ್ಪಳಿಸಿದ “ತಿತ್ಲಿ’ ಚಂಡಮಾರುತ ಕ್ಕಿಂತಲೂ ಫೋನಿ ಬಲಿಷ್ಠವಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸೋಮವಾರ ಸಂಜೆಯೇ ಚಂಡಮಾರುತದ ತೀವ್ರತೆ ಹೆಚ್ಚಾಗಿದ್ದು, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ಒಡಿಶಾದಲ್ಲಿ ಹೈಅಲರ್ಟ್‌ ಘೋಷಿಸ ಲಾಗಿದೆ. ಕರಾವಳಿ ಪ್ರದೇಶ ಗಳ ಜನರನ್ನು ಸ್ಥಳಾಂತರಿಸು ವಂತೆಯೂ ಸೂಚಿಸಲಾಗಿದೆ. ಜತೆಗೆ ಪುರಿಯಿಂದ ಎಲ್ಲರೂ ಮರಳುವಂತೆ ಪ್ರವಾಸಿಗರಿಗೆ ಒಡಿಶಾ ಸರಕಾರ ಸೂಚಿಸಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ.

ಫೋನಿ ಹಿನ್ನೆಲೆಯಲ್ಲಿ ತುರ್ತು ಕ್ರಮಕ್ಕಾಗಿ ಒಡಿಶಾದ 11 ಜಿಲ್ಲೆಗಳಲ್ಲಿ ಚುನಾವಣ ಆಯೋಗವು ನೀತಿ ಸಂಹಿತೆ ಯನ್ನು ವಾಪಸ್‌ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next