Advertisement

Aland: ಹುಟ್ಟುಹಬ್ಬದ ವೇಳೆ ದ್ವೇಷದ ಕೊಲೆ; ಸಂಭ್ರಮ ದುಃಖದಲ್ಲಿ ಅಂತ್ಯ

11:06 AM Oct 12, 2024 | Team Udayavani |

ಆಳಂದ: ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಆಶ್ರಮವೊಂದರ ಬಳಿ ಹುಟ್ಟುಹಬ್ಬ ಆಚರಿಸುತ್ತಿದ್ದ ಸಂದರ್ಭ ಕೊಲೆಯಾದ ಘಟನೆ ಅ.11ರ ಶುಕ್ರವಾರ ರಾತ್ರಿ ನಡೆದಿದೆ.

Advertisement

ಪಟ್ಟಣದ ಮಹಾತ್ಮಾ ಜ್ಯೋತಿಬಾ ಫುಲೆ ಬಡಾವಣೆಯ ನಿವಾಸಿ ಶಿವಕುಮಾರ ಸೂರ್ಯಕಾಂತ (20) (ಬಾಬುರಾವ) ದೇವನೂರ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಕುಡಿದ ಮತ್ತಿನಲ್ಲಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಆದರೆ ಈ ಕುರಿತು ತನಿಖೆ ನಡೆದಾಗಲೇ ಸತ್ಯಾಂಶ ಹೊರಬೀಳಲಿದೆ.

ಶಿವಕುಮಾರ ಕೊಲೆ ಆಗಿರುವ ಸುದ್ದಿ ಸಾರ್ವಜನಿಕರಲ್ಲಿ ತೀವ್ರ ಆಘಾತವನ್ನು ಮೂಡಿಸಿದ್ದು, ಆತನ ಕುಟುಂಬದಲ್ಲಿ ಅಕ್ರಂದನ ಮುಗಿಲು ಮುಟ್ಟಿದೆ.

ತಕ್ಷಣವೇ ಘಟನಾ ಸ್ಥಳಕ್ಕೆ ಆಳಂದ ಪೋಲೀಸ್ ಠಾಣೆಯ ಡಿಐಎಸ್ಪಿ ಬಿ.ಆರ್. ಗೋಪಿ, ಸಿಪಿಐ ಪ್ರಕಾಶ ಯಾತನೂರ ಹಾಗೂ ಪಿ.ಐ. ಮಹಾದೇವ ಪಂಚಮುಖಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next