Advertisement

Crime: ಪತ್ನಿಯ ಶೀಲ ಶಂಕಿಸಿ ಕಾಲು ಕತ್ತರಿಸಿದ ಪತಿ

11:02 AM Oct 10, 2024 | Team Udayavani |

ಬೆಂಗಳೂರು: ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ಆಕೆಯ ಕಾಲು ಕತ್ತರಿಸಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಸುದ್ದಗುಂಟೆಪಾಳ್ಯದ ಭವಾನಿ ನಗರ ನಿವಾಸಿ ಅನಿತಾ ಮೇರಿ (34) ಗಾಯಗೊಂಡವರು. ಕೃತ್ಯವೆಸಗಿ ದ ಆಕೆಯ ಪತಿ ಸಂತೋಷ್‌ ಕುಮಾರ್‌(38) ಎಂಬಾತನನ್ನು ಬಂಧಿಸಲಾಗಿದೆ.

ಮಂಗಳವಾರ ಬೆಳಗ್ಗೆ ಪತ್ನಿ ಜತೆ ಜಗಳ ನಡೆಸಿ, ಮಾರಕಾಸ್ತ್ರದಿಂದ ಆಕೆಯ ಕಾಲು ಕತ್ತರಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ಸಂತೋಷ್‌ ಕುಮಾರ್‌ 10 ವರ್ಷಗಳ ಹಿಂದೆ ಅನಿತಾ ಮೇರಿಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಸಂತೋಷ್‌ ಪೇಟಿಂಗ್‌ ಸೇರಿ ಕೆಲ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಅನಿತಾ ಇನ್ಶೂರೆನ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಈ ಹಿಂದೆ ಸುಬ್ರಹ್ಮಣ್ಯನಗರದಲ್ಲಿ ವಾಸವಾಗಿದ್ದರು. ಈ ವೇಳೆಯೂ ಪತ್ನಿಯ ಶೀಲ ಶಂಕಿಸಿ ಆಕೆ ಮೇಲೆ ಅನುಮಾನಗೊಂಡ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸುತ್ತಿದ್ದ. ಈ ಸಂಬಂಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಎರಡು ಬಾರಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಸಂತೋಷ್‌ ಕುಮಾರ್‌ಗೆ ಮತ್ತೂಮ್ಮೆ ಪತ್ನಿ ಮೇಲೆ ದೌರ್ಜನ್ಯ ಎಸಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಅದರಿಂದ ಬೇಸರಗೊಂಡಿದ್ದ ಅನಿತಾ ಮೇರಿ 6 ತಿಂಗಳ ಹಿಂದಷ್ಟೇ ಸುದ್ದಗುಂಟೆಪಾಳ್ಯದ ಭವಾನಿನಗರಕ್ಕೆ ಬಂದು ಮಕ್ಕಳ ಜತೆ ವಾಸವಾಗಿದ್ದರು. ಕೆಲ ದಿನಗಳ ಬಳಿಕ ಪತ್ನಿ ಜತೆ ಸಂಧಾನ ಮಾಡಿಕೊಂಡು ಆರೋಪಿ, ಪತ್ನಿ ಮತ್ತು ಮಕ್ಕಳ ಜತೆ ವಾಸಗಿದ್ದ. ಆದರೆ, ಕೆಲ ದಿನಗಳಿಂದ ಇಲ್ಲಿಯೂ ಮದ್ಯದ ಅಮಲಿನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಅ.8ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಪತ್ನಿ ಜತೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಮಾರಕಾಸ್ತ್ರದಿಂದ ಆಕೆಯ ಬಲಗಾಲಿಗೆ ಹೊಡೆದಿದ್ದು, ತೀವ್ರ ರಕ್ತಸ್ರಾವವಾಗಿದೆ. ಬಳಿಕ ಆರೋಪಿ ಪರಾರಿಯಾಗಿದ್ದ. ಅನಿತಾ ಮೇರಿಯ ಕೂಗಾಟ ಕೇಳಿ ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಮಹಿಳೆಯಿಂದ ದೂರು ದಾಖಲಿಸಿ ಕೊಂಡು ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next