Advertisement

ಅಭಿಮಾನಿಯ ಸಂಕಷ್ಟಕ್ಕೆ ಮಿಡಿದ ‘ಮೆಗಾ’ ಹೃದಯ…ಚಿಕಿತ್ಸೆಗೆ ಹಣ ನೀಡಿದ ಚಿರಂಜೀವಿ

06:25 PM Feb 20, 2021 | Team Udayavani |

ಆಂಧ್ರಪ್ರದೇಶ: ಮೆಗಾಸ್ಟಾರ್ ಚಿರಂಜೀವಿ ತನ್ನ ಅಭಿಮಾನಿಯೋರ್ವನ ಕಷ್ಟಕ್ಕೆ ನೆರವಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದವನ ಚಿಕಿತ್ಸೆಗೆ 1 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ.

Advertisement

ತಮ್ಮ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಸಾಮ್ರಾಟರಾಗಿರುವ ಚಿರಂಜೀವಿ, ತಮ್ಮ ವ್ಯಕ್ತಿತ್ವದಿಂದಲೂ ಜನಪ್ರಿಯತೆ ಗಳಿಸಿದ್ದಾರೆ. ಕಷ್ಟ ಹೇಳಿಕೊಂಡು ಬಂದವರಿಗೆ ಕೈಲಾದ ಸಹಾಯ ಮಾಡುವ ಮೂಲಕ ನೊಂದವರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ.

ಚಿರಂಜೀವಿ ಅವರ ಅಭಿಮಾನಿ ಹಾಗೂ ಆಲ್ ಇಂಡಿಯಾ ಚಿರಂಜೀವಿ ಯೂತ್ ಸಂಘಟನೆಯ ಅಧ್ಯಕ್ಷ ಪಿ.ಸುರೇಶ್ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ವಾರದಲ್ಲಿ ಮೂರ್ನಾಲ್ಕು ದಿನ ಚಿಕಿತ್ಸೆಗೆಂದು ಕಡಪಾ ಹಾಗೂ ತಿರುಪತಿಗೆ ಓಡಾಡುತ್ತಿದ್ದ. ತನ್ನ ಅಭಿಮಾನಿಯ ಈ ಸಂಕಷ್ಟದ ವಿಚಾರ ಚಿರಂಜೀವಿಯವರ ಗಮನಕ್ಕೆ ಬಂದಿದೆ. ಕೂಡಲೇ ಅಭಿಮಾನಿಯ ಬಳಿ ತೆರಳಿದ ಮೆಗಾ ಸ್ಟಾರ್, ಆತನ ಚಿಕಿತ್ಸೆಗೆ ಒಂದು ಲಕ್ಷ ರೂ. ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಇನ್ನು ಚಿರಂಜೀವಿ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ ಅನೇಕ ಜನಮೆಚ್ಚುವ ಕಾರ್ಯ ಮಾಡುತ್ತಿದ್ದಾರೆ. ಅವರದೇ ಹೆಸರಿನಲ್ಲಿರುವ ‘ಚಿರಂಜೀವಿ ಬ್ಲಡ್ ಬ್ಯಾಂಕ್’ ಗೆ ಸ್ವತಃ ತಾವೇ ರಕ್ತದಾನ ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next