Advertisement

Horscope: ಮನೆಯಲ್ಲಿ ಆನಂದದ ವಾತಾವರಣ ಇರಲಿದೆ

07:45 AM Sep 17, 2024 | Team Udayavani |

ಮೇಷ: ಕಾಲ್ಪನಿಕ ಸಮಸ್ಯೆಗಳನ್ನು ದೂರವಿಡಿ. ಉದ್ಯೋಗ ಕ್ಷೇತ್ರದ ಹೊಣೆಗಾರಿಕೆ ಬದಲಾವಣೆ.  ಮಹಿಳೆಯರ  ನೇತೃತ್ವದ ಗೃಹೋದ್ಯಮ ಉತ್ಪನ್ನ ಜನಪ್ರಿಯತೆ  ವೃದ್ಧಿ. ಪಾಲುದಾರಿಕೆ ವ್ಯವಹಾರಪಾರದರ್ಶಕತೆ ಇರಲಿ. ಸಂಸಾರದ ಎಲ್ಲರ ಆರೋಗ್ಯ ಉತ್ತಮ.

Advertisement

ವೃಷಭ: ನಿರ್ದಿಷ್ಟ  ಉದ್ದೇಶದೊಂದಿಗೆ ಕೆಲಸ ಮಾಡಿ. ಉದ್ಯೋಗದಲ್ಲಿ ಸ್ಥಿರ ಪ್ರಗತಿ.  ಯುವಜನರಿಗೆ ಕೃಷಿಕ್ಷೇತ್ರದ ಆಕರ್ಷಣೆ. ಖಾದಿ, ಗ್ರಾಮೋದ್ಯೋಗ ಯೋಜನೆಗಳಿಗೆ ಶುಭ ಕಾಲ. ರಂಗೋಲಿ, ಕಸೂತಿ ಕಲೆಗಳಲ್ಲಿ  ಮಹಿಳೆಯರಿಗೆ ಅನುಕೂಲ.

ಮಿಥುನ: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗೆ‌ ಯಶಸ್ಸು. ಉದ್ಯೋಗದಲ್ಲಿ ಪ್ರತಿಭೆಗೆ  ಅಗ್ರಸ್ಥಾನ. ವಸ್ತ್ರ ,  ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಬಾಲ್ಯದ ಒಡನಾಡಿಗಳೊಡನೆ ಅನಿರೀಕ್ಷಿತ ಭೇಟಿ. ಮನೆಯಲ್ಲಿ ಆನಂದದ ವಾತಾವರಣ.

ಕರ್ಕಾಟಕ: ಉದ್ಯೋಗದಲ್ಲಿ ಉನ್ನತ ಹೊಣೆ ಗಾರಿಕೆ. ಸಣ್ಣ ಉದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಜ್ಞಾನವೃದ್ಧಿಯ ಕಾರ್ಯಕ್ರಮಗಳಲ್ಲಿ ಭಾಗಿ. ಹಿರಿಯರ, ಮಹಿಳೆಯರ  ಆರೋಗ್ಯ ಉತ್ತಮ.

ಸಿಂಹ: ಜೊತೆಗಾರರಿಗೆ ಸಮಯೋಚಿತ ಮಾರ್ಗದರ್ಶನ. ಸ್ವಂತ ಉದ್ಯಮದಲ್ಲಿ ನೌಕರರ ಹಿತ ಕಾಯುವ ಮನೋವೃತ್ತಿ. ಸಮಾಜದಲ್ಲಿ ಗೌರವ ವೃದ್ಧಿ. ಮಕ್ಕಳ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಆದ್ಯತೆಯ ನೆಲೆಯಲ್ಲಿ ಕ್ರಮ. ದಾಂಪತ್ಯ ಸುಖ ಉತ್ತಮ.

Advertisement

ಕನ್ಯಾ: ಬದುಕುವ ಮಾರ್ಗದ ಕುರಿತು ಚಿಂತೆ ಬೇಡ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಕಾರ್ಯದಕ್ಷತೆಗೆ ಗೌರವ.  ಹೊಸಬಗೆಯ ಕೃಷಿ ಪ್ರಯೋಗಗಳಲ್ಲಿ ಯಶಸ್ಸು. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉತ್ಸಾಹದ ದಿನ.

ತುಲಾ: ಸಮಸ್ಯೆಗಳಿಗೆ ಬೆನ್ನು ತೋರಿಸಿ ಓಡದಿರಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಗುರುಸ್ಥಾನದಲ್ಲಿರುವ ಹಿರಿಯರು  ಮನೆಗೆ ಆಗಮನ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿಯಿಂದ ಮನಸ್ಸಮಾಧಾನ. ಸಂಸಾರದಲ್ಲಿ  ಎಲ್ಲರಿಗೂ ಉತ್ತಮ ಆರೋಗ್ಯ.

ವೃಶ್ಚಿಕ: ದೇಹದಾರ್ಢ್ಯ, ಮನೋದಾರ್ಢ್ಯ ಕಾಯ್ದುಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ಪ್ರಗತಿಗೆ ತೊಂದರೆ. ತೋಟಗಾರಿಕೆ ಬೆಳೆಗಳಿಗೆ ಬೇಡಿಕೆ ವೃದ್ಧಿ.

ಧನು: ಪಟ್ಟುಬಿಡದ ಪ್ರಯತ್ನದಿಂದ ಕಾರ್ಯ ಸಾಧನೆ. ಸಣ್ಣ ಉದ್ಯಮ ಘಟಕದ ಸ್ಥಾಪನೆಗೆ ಮುಂದುವರಿದ ಪ್ರಯತ್ನ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ಮುಂದಕ್ಕೆ.

ಮಕರ: ಮನಸ್ಸಿನ ಸಮತೋಲನದಿಂದ ಕಾರ್ಯಸಿದ್ಧಿ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ  ಕಾರ್ಯ ಮುಕ್ತಾಯ.  ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಫ್ಯಾಶನ್‌ ಡಿಸೈನಿಂಗ್‌ ವೃತ್ತಿಯವರಿಗೆ ಬೇಡಿಕೆ.

ಕುಂಭ: ಏಕಕಾಲಕ್ಕೆ ಹಲವು  ಕ್ಷೇತ್ರಗಳಿಂದ ಕರ್ತವ್ಯದ ಕರೆ. ಸಾಮಾಜಿಕ ವಲಯದ  ಆಪ್ತರಿಂದ ಸಹಾಯದ ಕೊಡುಗೆ. ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಸಹಾಯ. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.

ಮೀನ: ಅನೇಕ  ವಿಭಾಗಗಳತ್ತ ಲಕ್ಷ್ಯ ಹರಿಸುವ ಅನಿವಾರ್ಯತೆ. ಸರಕಾರಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನ.  ಕೃಷಿ ಆಧಾರಿತ ಉದ್ಯಮಗಳು ಪ್ರಗತಿಯಲ್ಲಿ. ಉದ್ಯೋಗ ಅರಸುತ್ತಿರುವವರಿಗೆ  ಸಮರ್ಪಕ ಅವಕಾಶಗಳು ಗೋಚರ. ಸಾಮಾಜಿಕ ಸಮಸ್ಯೆಗಳ ಪರಿಹಾರ ಪ್ರಯತ್ನ.

Advertisement

Udayavani is now on Telegram. Click here to join our channel and stay updated with the latest news.

Next