Advertisement

ಇಂದಿನ ಗ್ರಹಬಲ: ಈ ರಾಶಿಯವರಿಗೆ ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ!

07:42 AM Apr 08, 2021 | Team Udayavani |

08-04-2021

Advertisement

ಮೇಷ: ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಗಾಗ ವ್ಯಾಕುಲತೆ ಹಾಗೂ ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿಬಂದು ಅಸಮಾಧಾನ ಹೊಂದುವಿರಿ. ನೂತನ ಕಾರ್ಯಾರಂಭ ಯಾ ವ್ಯಾಪಾರ, ವ್ಯವಹಾರದ ಚಿಂತೆ ಬೇಡ.

ವೃಷಭ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳ ಚಿಂತನೆ ಕಾರ್ಯಗತವಾಗುತ್ತದೆ. ಸಾಂಸಾರಿಕವಾಗಿ ಗೃಹಿಣಿಯ ಸಹಕಾರ ಸುಪ್ರಸನ್ನತೆ ಹಾಗೂ ಸುಖಶಾಂತಿ ಅನುಭವಕ್ಕೆ ಬರುತ್ತದೆ. ನಿಮ್ಮ ಚಿಂತೆ ಧನಾತ್ಮಕವಾಗಿರಲಿ.

ಮಿಥುನ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಂಡಾವು. ಆರ್ಥಿಕವಾಗಿ ಎಷ್ಟೇ ಖರ್ಚು-ವೆಚ್ಚ ಗಳಿದ್ದರೂ ನಿರಂತರ ಧನಾಗಮನದಿಂದ ತೊಂದರೆ ಇರದು. ಧನಾಗಮನಕ್ಕೆ ವಿಪುಲ ಅವಕಾಶಗಳಿಗೂ ಕಠಿಣ ಪ್ರಯತ್ನ ಅಗತ್ಯ.

ಕರ್ಕ: ನಿಮ್ಮ ಆತ್ಮವಿಶ್ವಾಸ, ಪ್ರಯತ್ನಬಲದಿಂದ ನೀವು ಮುಂದೆ ಬರಲಿದ್ದೀರಿ. ಗೃಹದಲ್ಲಿ ಮಂಗಲಕಾರ್ಯಗಳ ಮಾತುಕತೆಗಳು ಫ‌ಲ ನೀಡಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಿರ್ಲಕ್ಷ್ಯ ತೋರದಿದ್ದರೆ ಒಳ್ಳೆಯದು.

Advertisement

ಸಿಂಹ: ಮಾತು ಕಡಿಮೆ ಮಾಡಿ ಕಾರ್ಯದತ್ತ ಗಮನಹರಿಸಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ. ಶುಭವಿದೆ.

ಕನ್ಯಾ: ತಾಳ್ಮೆ ಸಹನೆಯಿಂದ ಮುಂದುವರಿದಲ್ಲಿ ಮುನ್ನಡೆಗೆ ಸಾಧಕವಾಗುತ್ತದೆ. ಆಗಾಗ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಋಣಭಾದೆಯು ಕಾಡಲಿದೆ. ಕೆಲವೊಂದು ಬಹಿರಂಗಗೊಂಡು ರಾದ್ಧಾಂತವಾದೀತು.

ತುಲಾ: ಪಿತ್ತ ವಾಯುಪ್ರಕೋಪದಿಂದ ಅನಾರೋಗ್ಯ ಕಾಡಬಹುದು. ರಾಜಕೀಯದವರಿಗೆ ಉನ್ನತ ಸ್ಥಾನಮಾನವು ದೊರಕೀತು. ಪ್ರಯತ್ನಿಸಿರಿ. ವ್ಯಾಪಾರಿ ವರ್ಗದವರಿಗೆ ಚೇತರಿಕೆಯ ದಿನಗಳಿವು. ಸ್ವಂತ ದುಡಿಮೆಯವರಿಗೆ ಜಾಗ್ರತೆ.

ವೃಶ್ಚಿಕ: ಅನಿರೀಕ್ಷಿತ ಕಾರ್ಯಸಾಧನೆ ನಿಮಗೆ ಅಚ್ಚರಿ ತರಲಿದೆ. ಅವಿವಾಹಿತರ ವೈವಾಹಿಕ ಸಂಘಟನೆಗೆ ಪೂರಕವಾದ ಪ್ರಚೋದನೆ ಲಭಿಸೀತು. ಆಕಸ್ಮಿಕ ಧನಾನುಕೂಲ ಕಂಡುಬಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

ಧನು: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ಮುನ್ನಡೆಗೆ ಸಾಧಕವಾಗುತ್ತದೆ. ಆಗಾಗ ಅಡೆತಡೆಗಳು ಕಂಡುಬಂದರೂ ಬೇಸರಿಸದಿರಿ. ಪ್ರಯತ್ನಬಲ, ಕಠಿಣ ಶ್ರಮ ನಿಮ್ಮನ್ನು ಗುರಿಯತ್ತ ಸಾಗಿಸಲಿದೆ. ಆರೋಗ್ಯ ಉತ್ತಮ.

ಮಕರ: ಸದಾಕಾಲವೂ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಬೇಕೇಬೇಕು. ಉದ್ಯೋಗದಲ್ಲಿ ಎಡರುತೊಡರು ಕಂಡುಬಂದೀತು.

ಕುಂಭ: ಎಷ್ಟೇ ಕಿರಿಕಿರಿ ಉಂಟಾದರೂ ಸನ್ಮಿತ್ರರ ಸಹಕಾರಗಳಿಂದ ಪ್ರಗತಿ, ಸಮಾಧಾನಗಳು ದೊರಕಲಿದೆ. ಸಾಂಸಾರಿಕವಾಗಿ ಅಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ಸಮಾಧಾನ ತಂದುಕೊಡಲಿದೆ. ಅತಿಥಿಗಳ ಆಗಮನವಿದೆ.

ಮೀನ: ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿದೆ. ಆದರೂ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು. ಅತೀ ಖರ್ಚು ಕಂಡುಬರುವುದು. ಅವಿವಾಹಿತರ ಮನೋಕಾಮನೆಗಳು ಪೂರ್ಣವಾದೀತು.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next