Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ!

07:49 AM Feb 26, 2021 | Team Udayavani |

 

Advertisement

26-02-2021

ಮೇಷ: ವಿದ್ಯಾರ್ಥಿ ಸಮೂಹಕ್ಕೆ ಹೊಸ ಹುರುಪು ಕಾಣಿಸಲಿದೆ. ನಿರುದ್ಯೋಗಿಗಳಿಗೆ ಹಾಗೂ ಅವಿವಾಹಿತರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ಒದಗಿ ಬರಲಿವೆ. ಸಾಂಸಾರಿಕವಾಗಿ ಪತ್ನಿ-ಪುತ್ರರ ಸಹಕಾರ, ಪ್ರೀತಿ – ವಿಶ್ವಾಸಗಳಿವೆ.

ವೃಷಭ: ಕಾರ್ಯರಂಗದಲ್ಲಿ ಛಲ ಬಿಡದೆ, ಪಟ್ಟು ಹಿಡಿದು ದುಡಿಯಿರಿ. ನಿರೀಕ್ಷಿತ ಅಭಿವೃದ್ಧಿ ನಿಶ್ಚಿತ ರೂಪ ದಲ್ಲಿ ಕಂಡುಬಂದೀತು. ಸ್ತ್ರೀಯರ ವಿಚಾರದಲ್ಲಿ ಸಮಸ್ಯೆಗಳು ತೋರಿ ಬಾರದಂತೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ಉತ್ಸಾಹ ಕುಗ್ಗಲಿದೆ.

ಮಿಥುನ: ಆರೋಗ್ಯಕ್ಕಾಗಿ ದೇಹದ ಸ್ಥಿತಿಯನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಿರಿ. ಹಣಕಾಸಿನ ಸ್ಥಿತಿಯು ಆಗಾಗ ಏರುಪೇರಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಯಾವುದೇ ವಿಚಾರದಲ್ಲಿ ನಿರಾಸೆಗೊಳ್ಳದಿರಿ.

Advertisement

ಕರ್ಕ: ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮುನ್ನಡೆಯಿರಿ. ಆಗಾಗ ಭಿನ್ನಾಭಿಪ್ರಾಯದಿಂದ ಸಾಂಸಾರಿಕ ಸುಖ ಕಿರಿಕಿರಿಯೆನಿಸಲಿದೆ. ಅವಿವಾಹಿತರಿಗೆ ವೈವಾಹಿಕ ಜೋಡಣೆ ಸಂತಸ ತಂದೀತು.

ಸಿಂಹ: ದೂರ ಸಂಚಾರದ ಸಿದ್ಧತೆ ಸಂತಸ ತರಲಿದೆ. ಆರೋಗ್ಯಭಾಗ್ಯವು ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ಹಣದ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ. ವಾರಾಂತ್ಯ ಶುಭವಿದೆ.

ಕನ್ಯಾ: ಧಾರ್ಮಿಕ ರಂಗದ ಚಟುವಟಿಕೆಗಳು ಸಂತಸದ ವಾತಾವರಣಕ್ಕೆ ಕಾರಣವಾಗಲಿವೆ. ಬ್ಯಾಂಕ್‌, ವಿತ್ತ ಖಾತೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಸಫ‌ಲತೆ ತಂದುಕೊಡಲಿವೆ. ಕೆಲವೊಮ್ಮೆ ಕೆಲಸದ ಒತ್ತಡವು ಮಾನಸಿಕವಾಗಿ ಕಿರಿಕಿರಿ ಎನಿಸಲಿವೆ.

ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆಯಿಂದ ಆರ್ಥಿಕ ಸ್ಥಿತಿಯು ಸುಧಾರಿಸುತ್ತಲೇ ಹೋಗುತ್ತದೆ. ಹಿತಶತ್ರುಗಳ ಸಾಮರ್ಥ್ಯದ ಬಲೆಗೆ ಬೀಳುವ ಬದಲಿಗೆ ತಪ್ಪಿಸಿಕೊಂಡಲ್ಲಿ ಉತ್ತಮ. ಹೊಸ ಕಾರ್ಯಗಳ ಚಿಂತನೆಗೆ ಇದು ಸಕಾಲ.

ವೃಶ್ಚಿಕ: ಪದೇ ಪದೇ ಕಂಡುಬರುವ ಅಡ್ಡಿ-ಆತಂಕಗಳಿಂದ ಮನೋಚಾಂಚಲ್ಯ ಕಾಡಬಹುದು. ವ್ಯವಹಾರ, ವ್ಯಾಪಾರ ಕಾರ್ಯಕ್ಷೇತ್ರದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ತೋರಿಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಮುಂದುವರಿಯಬೇಕಾದೀತು.

ಧನು: ಅವಿವಾಹಿತರಿಗೆ ಕಂಕಣಬಲ ತೋರಿಬರಲಿದೆ. ದೇಹಾರೋಗ್ಯದ ಸ್ಥಿತಿಯಲ್ಲಿ ಅಭಿವೃದ್ಧಿ ಇರುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಂತಸ ತರುತ್ತದೆ. ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ವಾರಾಂತ್ಯ ಶುಭವಿದೆ.

ಮಕರ: ಆರೋಗ್ಯವು ಉತ್ತಮವಿದ್ದು, ಮನೋನೆಮ್ಮದಿಯಿಂದ ಮಾನಸಿಕ ಶಾಂತಿ ದೊರಕಲಿದೆ. ಅಧಿಕಾರಿ ಹಾಗೂ ಉದ್ಯೋಗಸ್ಥರಿಗೆ ಶುಭವಾರ್ತೆ ಇದೆ. ದೇವತಾ ಕಾರ್ಯ ದಿಂದ ಮನೋಲ್ಲಾಸ. ಬಂಧುಮಿತ್ರರ ಆಗಮನ ಸಂತಸ ತರಲಿದೆ.

ಕುಂಭ: ಆತ್ಮೀಯರಿಂದ ಪುನಃ ಉತ್ತಮ ಸಹಕಾರವು ದೊರಕಲಿದೆ. ವೃತ್ತಿರಂಗದಲ್ಲಿ ಶತ್ರುಗಳಿಂದ ತೊಂದರೆ ಕಂಡುಬರಲಿದೆ. ಸರಕಾರದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿದೆ. ಶಕ್ತಿಮೀರಿ ದುಡಿದಲ್ಲಿ ಪ್ರಗತಿ ಸಾಧಿಸುವಿರಿ.

ಮೀನ: ಹಿತಶತ್ರುಗಳ ಸಮಯಸಾಧಕತನ ಆಗಾಗ ಘಾಸಿಗೊಳಿಸಲಿದೆ. ತಾಳ್ಮೆ, ಸಹನೆಯಿಂದ ಮುಂದುವರಿದಲ್ಲಿ ಮುನ್ನಡೆಗೆ ಸಾಧಕವಾಗುತ್ತದೆ. ಅವಿವಾಹಿತರಿಗೆ ಮನೋಕಾಮನೆಗಳು ಪೂರ್ಣಗೊಂಡಾವು.

 

ಎನ್.ಎಸ್. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next