Advertisement

ಇಂದು ನಿಮ್ಮ ಗ್ರಹಬಲ: ಗೆಳೆಯರ ಸಹವಾಸವು ಈ ರಾಶಿಯವರನ್ನು ಅಡ್ಡ ದಾರಿಗೆ ಎಳೆದೀತು!

07:53 AM Feb 12, 2021 | Team Udayavani |

12-02-2021

Advertisement

ಮೇಷ: ಸುಖದುಃಖ, ಕಷ್ಟ ಸುಖಗಳ ಸಮ್ಮಿಶ್ರ ಫ‌ಲವು ನಿಮಗೆ ಕಂಡುಬರುವುದು. ಹಲವು ಕಡೆಗಳಿಂದ ಎಷ್ಟು ಕಷ್ಟಗಳು ಬಂದರೂ ಅದನ್ನು ಸಹಿಸುವ ಶಕ್ತಿ ನಿಮಗಿರುತ್ತದೆ. ಸಮಾಧಾನದಿಂದ ಮುಂದುವರಿಯಿರಿ.

ವೃಷಭ: ನಿಮ್ಮ ಎಣಿಕೆಗಿಂತ ಮಿಗಿಲಾದ ಧನಸಂಪತ್ತು ನಿಮ್ಮದಾದೀತು. ಆದರೆ ಅಡ್ಡದಾರಿಯನ್ನು ಹಿಡಿಯಬೇಡಿ. ಗೆಳೆಯರ ಸಹವಾಸವು ನಿಮ್ಮನ್ನು ಅಡ್ಡ ದಾರಿಗೆ ಎಳೆದೀತು. ಜಾಗ್ರತೆ ಮಾಡಿದರೆ ಉತ್ತಮ ಫ‌ಲವಿದೆ.

ಮಿಥುನ: ಆಸ್ತಿಯ ಮಾರಾಟದಿಂದ ಒಳ್ಳೆಯ ಲಾಭವು ಕಂಡುಬರುವುದು. ಆದರೆ ಜೋಪಾನವಾಗಿಟ್ಟು ಕೊಳ್ಳುವುದು. ನಿಮ್ಮ ಜವಾಬ್ದಾರಿಯಾಗಿದೆ. ಅಧಿಕಾರಿ ವರ್ಗದಲ್ಲಿ ಭಿನ್ನಮತ ಕಂಡುಬಂದೀತು. ಕಾರ್ಯಸಿದ್ಧಿಯಾದೀತು.

ಕರ್ಕ: ಇದ್ದುದರಲ್ಲೇ ತೃಪ್ತಿ ಪಡುವ ಮನಸ್ಸನ್ನು ಇಟ್ಟುಕೊಳ್ಳಿರಿ. ಆರೋಗ್ಯಭಾಗ್ಯವು ಸರಿ ಇದ್ದರೂ ಕೌಟುಂಬಿಕವಾಗಿ ನೆಮ್ಮದಿ ಇರದು. ಸರ್ಕಾರಿ ಅಧಿಕಾರಿಗಳಿಂದ ತೊಂದರೆಗಳು ಕಂಡುಬಂದೀತು. ಕಲಾಕ್ಷೇತ್ರದಲ್ಲಿ ಯಶಸ್ಸಿದೆ.

Advertisement

ಸಿಂಹ: ಹಲವು ಸುಧಾರಣೆಗಳು ಕಂಡುಬಂದರೂ ಮನಸ್ಸು ಉದ್ವೇಗದಿಂದ ವಿಮುಖವಾಗಿರಲಾರದು. ಮಕ್ಕಳಿಗೆ ಯಶೋವೃದ್ಧಿ, ಕಾರ್ಯಸಿದ್ಧಿಯ ಕಂಡುಬರುವುದು. ಗೃಹದಲ್ಲಿ ಸಂಭ್ರಮವು ಕಂಡುಬರುವುದು.

ಕನ್ಯಾ: ವೃತ್ತಿ ಕ್ಷೇತ್ರದಲ್ಲಿ ಸ್ಥಾನಮಾನ ಬದಲಾದೀತು. ಒಳಜಗಳ, ಅತೃಪ್ತಿ, ಅಸೂಯಾದಿಗಳಿಂದ ಮಿತ್ರಪಕ್ಷದವರೂ ಅಹಿತರೆನಿಸಿಯಾರು. ಕಚೇರಿ ಕೆಲಸದಲ್ಲಿ ಚಿಂತೆ ಹೆಚ್ಚಲಿದೆ. ದುರ್ವ್ಯಸನಗಳಿಗೆ ದಾಸರಾಗದಿರಿ.

ತುಲಾ: ವಿದ್ಯಾರ್ಜನೆಯಲ್ಲಿ ಭಂಗ ಕಂಡುಬಂದೀತು. ಆಟೋಟ ಗಳಲ್ಲೂ ಕೀರ್ತಿ ತಂದೀತು. ಪುಸ್ತಕ ವ್ಯಾಪಾರ, ಪತ್ರಿಕೋದ್ಯಮ, ಅಲಂಕರಣ ಸಾಮಾಗ್ರಿಗಳ ವ್ಯಾಪಾರವು ಭರಾಟೆಯಿಂದ ನಡೆದೀತು. ಶುಭವಿದೆ.

ವೃಶ್ಚಿಕ: ಹೊಸ ಹೊಸ ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿವೆ. ಗುಡಿಕೈಗಾರಿಕೆಯಲ್ಲಿ ತಯಾರಾದ ಸಾಮಾಗ್ರಿ ಮಾರಾಟವಾಗದೆ‌ ಹಣಕ್ಕಾಗಿ ಚಡಪಡಿಸುವಂತಾದೀತು. ಕೃಷಿ, ಆದಾಯವು ಸ್ವಲ್ಪ ನೆಮ್ಮದಿ ತರಲಿದೆ.

ಧನು: ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶೋವರ್ಷದ ಕಾಲ. ಕಬ್ಬಿಣ, ತವರ, ಅಲ್ಯೂಮಿನಿಯಂ ಪಾತ್ರೆ ವ್ಯವಹಾರಗಳಲ್ಲಿ ಲಾಭ ಕಡಿಮೆ ಇರುತ್ತದೆ. ಹಿತ್ತಾಳೆ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿ ಉತ್ತಮ ಅಭಿವೃದ್ಧಿ ಇದೆ.

ಮಕರ: ಮಂಗಲ ಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ಆಪೆ¤àಷ್ಟರ ಸಹಾಯವು ಕಂಡುಬರಲಿದೆ. ಬಾಕಿ ವಸೂಲಿ ಭರದಿಂದ ನಡೆದು ಸಫ‌ಲತೆ ಸಾಧಿಸುವಿರಿ. ಕ್ರಯವಿಕ್ರಯದಲ್ಲಿ ನಷ್ಟ ಸಂಭವವೇ ಹೆಚ್ಚಲಿದೆ. ಶುಭವಿದೆ.

ಕುಂಭ: ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶೋ ವರ್ಷದ ಕಾಲ. ದೇವತಾರಾಧನೆ ಹಾಗೂ ಧಾರ್ಮಿಕ ಕಾರ್ಯಗಳು ನಡೆದು ಖರ್ಚು ತಂದರೂ ಸಮಾಧಾನವು ಸಿಗಲಿದೆ. ಕಷ್ಟಗಳಿಗೆ ತಡೆಯೊಡ್ಡಿ ನಿಂತಿರಿ.

ಮೀನ: ಸಂಗೀತಾದಿ ಪರಿಣಿತರಿಗೆ ಉತ್ತಮ ಆದಾಯದ ಜೊತೆಗೆ ಕೀರ್ತಿಯು ಕೂಡ ಲಭ್ಯವಿರುತ್ತದೆ. ಗೃಹ ನಿರ್ಮಾಣದಂತಹ ಮಹತ್ಕಾರ್ಯಗಳು ಜರಗಲಿವೆ. ಋಣಭಾದೆಯಿದೆ. ಧನ ವಿನಿಯೋಗ ಉತ್ತಮ ಫ‌ಲದಾಯಕ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next