Advertisement

ರಾಜ್ಯದಲ್ಲಿ ಸತತ ಎರಡನೆ ದಿನವೂ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚು

08:50 PM May 19, 2021 | Team Udayavani |

ಬೆಂಗಳೂರು: ಕೋವಿಡ್ ಸೋಂಕಿನ ಅಟ್ಟಹಾಸದ ನಡುವೆಯೂ ರಾಜ್ಯದ ಜನತೆಗೆ ಇಂದು ಕೂಡ ನೆಮ್ಮದಿದಾಯಕ ಸುದ್ದಿ ಕೇಳಿ ಬಂದಿದೆ. ಸತತ ಎರಡನೆ ದಿನವೂ ಹೊಸ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

Advertisement

ಇಂದು (ಮೇ.19) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ :18.05.2021,00:00 ರಿಂದ 23.59 ರವರೆಗೆ) 49953 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ಅವಧಿಯಲ್ಲಿ 34281 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಇನ್ನು 468 ಜನರು ಸೋಂಕಿನಿಂದ ಮೃತ ಪಟ್ಟಿದ್ದಾರೆ.

ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-362, ಬಳ್ಳಾರಿ-1297,ಬೆಳಗಾಗಿ-2234, ಬೆಂಗಳೂರು ಗ್ರಾಮಾಂತರ-812, ಬೆಂಗಳೂರು ನಗರ-11772, ಬೀದರ್-149, ಚಾಮರಾಜನಗರ-576,ಚಿಕ್ಕಬಳ್ಳಾಪುರ-555, ಚಿಕ್ಕಮಗಳೂರು-1047, ಚಿತ್ರದುರ್ಗ-422, ದಕ್ಷಿಣ ಕನ್ನಡ-829, ದಾವಣಗೆರೆ-700, ಧಾರವಾಡ-871, ಗದಗ-486, ಹಾಸನ-1428, ಹಾವೇರಿ-170, ಕಲಬುರಗಿ-440,ಕೊಡಗು-197, ಕೋಲಾರ-895, ಕೊಪ್ಪಳ-336, ಮಂಡ್ಯ-730, ಮೈಸೂರು-1730, ರಾಯಚೂರು-469, ರಾಮನಗರ-304,  ಶಿವಮೊಗ್ಗ-819, ತುಮಕೂರು-2427, ಉಡುಪಿ-856, ಉತ್ತರ ಕನ್ನಡ-833, ವಿಜಯಪುರ-227, ಯಾದಗಿರಿ-308.

Advertisement

Udayavani is now on Telegram. Click here to join our channel and stay updated with the latest news.

Next