Advertisement

ಇಂದು ಹೊಡಿ ಒಂಬತ್ತ್ ಹಾಡು ಬಿಡುಗಡೆ

10:50 AM Jul 10, 2017 | |

ಗಣೇಶ್‌ ಅಭಿನಯದ ಮತ್ತು ಯೋಗರಾಜ್‌ ಭಟ್‌ ನಿರ್ದೇಶನದ “ಮುಗುಳು ನಗೆ’ ಚಿತ್ರದ ಹಾಡುಗಳ ಸಿಡಿಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಮಧ್ಯೆ ಚಿತ್ರದ “ಹೊಡಿ ಒಂಬತ್ತ್’ ಹಾಡು ಇಂದು (ಸೋಮವಾರ) ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಲಿದೆ.

Advertisement

ಹಾಡನ್ನು ಬಿಡುಗಡೆ ಮಾಡುವುದಕ್ಕೆ ಗಣೇಶ್‌, ಯೋಗರಾಜ್‌ ಭಟ್‌, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ಮಾಪಕ ಸೈಯದ್‌ ಸಲಾಂ ಸೇರಿದಂತೆ ಚಿತ್ರತಂಡದ ಹಲವರು ಇಂದು ಹುಬ್ಬಳ್ಳಿಗೆ ಬರಲಿದ್ದಾರೆ.ವಿಶೇಷವೆಂದರೆ, ಒಂದೇ ಹಾಡು ಎರಡು ಸಾರಿ ಬಿಡುಗಡೆಯಾಗುತ್ತಿರುವುದು. ಹೌದು, ಮಧ್ಯಾಹ್ನ 1 ಗಂಟೆಗೆ ಚಿತ್ರತಂಡದವರು ಖಾಸಗೀ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ಮಧ್ಯೆ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

ನಂತರ ಮಧ್ಯಾಹ್ನ 3.30ಕ್ಕೆ ರಾಣಿ ಚೆನ್ನೆಮ್ಮ ಪ್ರತಿಮೆಗೆ ಮತ್ತು ನಾಲ್ಕಕ್ಕೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಜೆ ಐದರ ನಂತರ ಲಕ್ಷಿ ಮಾಲ್‌ನಲ್ಲಿ “ಹೊಡಿ ಒಂಬತ್ತ್’ ಹಾಡನ್ನು ಮತ್ತೂಮ್ಮೆ ಬಿಡುಗಡೆ ಮಾಡಲಾಗುತ್ತದೆ. ಇದು “ಮುಗುಳು ನಗೆ’ಯ ಮೊದಲ ಹಾಡಿನ ಕಥೆಯಾದರೆ, ಎರಡನೆಯ ಹಾಡಾದ “ರೂಪಸಿ’ಯನ್ನು 12ನೇ ತಾರೀಖೀನಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next