Advertisement

ಇಂದು ಉಚಿತ ಸಾಮೂಹಿಕ ವಿವಾಹ

12:14 PM Mar 19, 2017 | Team Udayavani |

ಕೆ.ಆರ್‌.ನಗರ: ಪಟ್ಟಣದ ಆಂಜನೇಯ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ  ಅಶ್ವಥಕಟ್ಟೆ ಮತ್ತು ನಾಗಪ್ರತಿಷ್ಠಾಪನಾ ಹಾಗೂ ಉಚಿತ ಸಾಮೂಹಿಕ ವಿವಾಹ ಮಾ.19 ಭಾನುವಾರ ನಡೆಯಲಿದೆ.

Advertisement

ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯದ ಆವರಣದಲ್ಲಿ ಸಾರ್ವಜನಿಕರ ಸಹಕಾರದಿಂದ ಅಶ್ವಥಕಟ್ಟೆ ನಿರ್ಮಿಸಲಾಗಿದ್ದು ಭಾನುವಾರ ಲೋಕಾರ್ಪಣೆ ಹಾಗೂ ನಾಗಪ್ರತಿಷ್ಠಾಪನಾ, ಸಾಮೂಹಿಕವಿವಾಹ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11 ಗಂಟೆ ಯಿಂದ 11.40ರ ಶುಭ ವೃಷ ಭ ಲಗ್ನದಲ್ಲಿ ಸಾಮೂಹಿಕ ವಿವಾಹ ನೇರವೆರಿಸಲಾಗುವುದು.

ಸಮಾರಂಭಕ್ಕೆ ಮಾಜಿ ಮುಖ್ಯ ಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ,  ಅಧ್ಯಕ್ಷತೆ ಶಾಸಕ ಸಾ.ರಾ.ಮಹೇಶ್‌ ವಹಿಸಲಿದ್ದಾರೆ. ಉದ್ಘಾಟನೆ ಮಾಜಿ ಸಂಸದ ಎಚ್‌.ವಿಶ್ವನಾಥ್‌, ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್‌ ಮುಖಂಡ ದೊಡ್ಡಸ್ವಾಮೇಗೌಡ, ಪುರಸಭಾ ಅಧ್ಯಕ್ಷೆ ಕವಿತಾವಿಜಯಕುಮಾರ್‌, ಜಿಪಂ ಸದಸ್ಯರಾದ ಡಿ.ರವಿಶಂಕರ್‌, ಅಚ್ಚುತಾನಂದ, ಅಮಿತ್‌ ವಿ.ದೇವರಹಟ್ಟಿ, ಉಪಾಧ್ಯಕ್ಷೆ ಪಾರ್ವತಿನಾಗರಾಜು,

ತಹಸೀಲ್ದಾರ್‌ ಹೆಚ್‌.ಎನ್‌.ನಾಗರಾಜು, ಮೂಳೆತಜ್ಞ ಡಾ. ಮೆಹಬೂಬ್‌ಖಾನ್‌, ನವನಗರ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ಬಸಂತ್‌, ಪುರಸಭಾ ಸದಸ್ಯರು ಕೆ.ಜಿ.ಸುಬ್ರಮಣ್ಯ, ಕೆ.ಎಲ್‌.ಕುಮಾರ್‌, ಉಮೇಶ್‌, ಹೆಚ್‌.ಸಿ.ರಾಜು, ನಟರಾಜು, ಮುಖ್ಯಾಧಿಕಾರಿ ನಾಗಶೆಟ್ಟಿ, ನಾಗೇಶ್‌ ಗುತ್ತಿಗೆದಾರರು, ಬಿ.ಅಶೋಕ್‌ ಧರ್ಮಸ್ಥಳ ಸಂಯೋಜನಾಧಿಕಾರಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next