Advertisement

ಇಂದು ಪಲಿಮಾರು ಶ್ರೀಪಾದರ ಪುರಪ್ರವೇಶ

12:13 PM Jan 03, 2018 | Team Udayavani |

ಉಡುಪಿ: ಭಾವೀ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತೀರ್ಥಕ್ಷೇತ್ರಗಳ ಯಾತ್ರೆಯನ್ನು ಮುಗಿಸಿ ಜ. 3ರ ಅಪರಾಹ್ನ ಪುರಪ್ರವೇಶ ಮಾಡಲಿದ್ದಾರೆ. 

Advertisement

ಅಪರಾಹ್ನ 3.30ಕ್ಕೆ ಜೋಡುಕಟ್ಟೆಯಲ್ಲಿ ಶ್ರೀ ಪಾದರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಮೆರವಣಿಗೆಯಲ್ಲಿ ಆಗಮಿಸಿದ ಬಳಿಕ ಸಂಜೆ 6.35ಕ್ಕೆ ಶ್ರೀಪಾದರು ಶ್ರೀಮಠವನ್ನು ಪ್ರವೇಶಿಸುವರು. ಸಂಜೆ 6.45ಕ್ಕೆ ರಥಬೀದಿಯಲ್ಲಿ ನಿರ್ಮಿಸುವ ವೇದಿಕೆಯಲ್ಲಿ ಶ್ರೀಪೇಜಾವರ ಮಠಾಧೀಶರ ಅಧ್ಯಕ್ಷತೆಯಲ್ಲಿ ಪಲಿಮಾರು ಶ್ರೀಪಾದರನ್ನು ಅಭಿನಂದಿಸಲಾಗುವುದು. ಡಾ| ಡಿ. ವೀರೇಂದ್ರ ಹೆಗ್ಗಡೆ, ಬದರೀ ಕ್ಷೇತ್ರದ ರಾವಲ್‌ಜಿ ಈಶ್ವರಪ್ರಸಾದ ನಂಬೂದಿರಿ, ಸಚಿವ ಪ್ರಮೋದ್‌ ಮಧ್ವರಾಜ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಡಾ| ಮೋಹನ ಆಳ್ವ  ಮೊದಲಾದವರು ಪಾಲ್ಗೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next