Advertisement

ಬೆಳಗಾವಿಯಲ್ಲಿಂದು ಜೆಡಿಎಸ್‌ ಸಮಾವೇಶ

06:15 AM Nov 14, 2017 | Team Udayavani |

ಬೆಳಗಾವಿ: ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಯೊಂದಿಗೆ ಮೈಸೂರಿನಲ್ಲಿ ಕರ್ನಾಟಕ ವಿಕಾಸ ಯಾತ್ರೆ ಮತ್ತು ಬೃಹತ್‌ ಸಮಾವೇಶ ನಡೆಸಿದ್ದ ಜೆಡಿಎಸ್‌ ಮಂಗಳವಾರ ಬೆಳಗಾವಿಯಲ್ಲಿ ಬೃಹತ್‌ ರೈತ ಸಮಾವೇಶ ಹಮ್ಮಿಕೊಂಡಿದೆ. 

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ರೈತ ನಾಯಕ ಬಾಬಾಗೌಡ ಪಾಟೀಲ್‌ ಪಾಲ್ಗೊಂಡು ತಮ್ಮ ಬೆಂಬಲವನ್ನು ಜೆಡಿಎಸ್‌ಗೆ ನೀಡಲಿದ್ದಾರೆ. 

ಜತೆಗೆ ಬಾಬಾಗೌಡ ಪಾಟೀಲ್‌ ಅವರ ಪುತ್ರ ಪ್ರಕಾಶ್‌ ಗೌಡ ಪಾಟೀಲ್‌ ಇದೇ ವೇಳೆ ಜೆಡಿಎಸ್‌ ಸೇರಲಿದ್ದಾರೆ. ಅಲ್ಲದೆ, ರಾಯಚೂರಿನಿಂದ ಬೈಕ್‌ ರ್ಯಾಲಿ ಮೂಲಕ ಹೊರಟಿರುವ ಕಾಂಗ್ರೆಸ್‌ನ ಉಚ್ಛಾಟಿತ ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ಈ ಸಮಾವೇಶದಲ್ಲಿ ಪಾಲ್ಗೊಂಡು ಅಧಿಕೃತವಾಗಿ ಜೆಡಿಎಸ್‌ ಜತೆ ಗುರುತಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next