Advertisement

Mangalore: ಇಂದು ರಥಬೀದಿ ಬ್ರಹ್ಮರಥೋತ್ಸವ

11:36 PM Feb 15, 2024 | Team Udayavani |

ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವವು ಫೆ. 16ರಂದು ನಡೆಯಲಿದೆ.

Advertisement

ಬೆಳಗ್ಗೆ 6.30ಕ್ಕೆ ಪ್ರಾರ್ಥನೆ, 9ಕ್ಕೆ ಪಂಚಾಮೃತಾಭಿಷೇಕ, 11ಕ್ಕೆ ಪುಳಕಾಭಿಷೇಕ, ಷಟ್ಕಲಷಾಭಿಷೇಕಂ, 1.30ಕ್ಕೆ ಯಜ್ಞ, 3.30ಕ್ಕೆ ಪೂರ್ಣಾಹುತಿ ಆರತಿ, 4.30ಕ್ಕೆ ಮಹಾಬಲಿ, ಸ್ವರ್ಣ ಪಲ್ಲಂಕಿ ಸವಾರಿ ನಡೆಯುವುದು. ಸಂಜೆ 5.40ಕ್ಕೆ ರಥಪೂಜೆ ನಡೆದು ಶ್ರೀ ಬ್ರಹ್ಮರಥಾರೋಹಣ ನೆರವೇರಲಿದೆ. 7ಕ್ಕೆ ಸಮಾರಾಧನೆ ನಡೆದು 11.30ರಿಂದ ಬ್ರಹ್ಮರಥೋತ್ಸವ ನಡೆಯಲಿದೆ.

17ರ ಮುಂಜಾನೆ 4ಕ್ಕೆ ವಸಂತ ಪೂಜೆ, ಪ್ರಸಾದ ವಿತರಣೆ ಬೆಳಗ್ಗೆ 5ಕ್ಕೆ ಪೂಜಾರತಿ ನಡೆಯುವುದು. 17ರ ಬೆಳಗ್ಗೆ 8ಕ್ಕೆ ದ್ವಾರ ಪೂಜೆ, ಯಜ್ಞ ವಿಸರ್ಜನೆ, ಅವಭೃಥ ಸ್ನಾನ (ಸ್ವರ್ಣ ಪಲ್ಲಂಕಿ), ರಾತ್ರಿ 10ರಿಂದ ಧ್ವಜ ವಿಸರ್ಜನ, ಮಹಾಪೂಜೆ, ವಸಂತ ಪೂಜೆ, ಪ್ರಸಾದ ವಿತರಣೆ ನೆರವೇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next