Advertisement

Tobacco ಅನಿವಾರ್ಯವಲ್ಲ ಕಂಪನಿಗಳ ಬಣ್ಣದ ಮಾತಿಗೆ ಬೆರಗಾಗಬೇಡಿ :ಸಚಿವ ಕೆ.ವೆಂಕಟೇಶ್

06:35 PM Aug 22, 2023 | Team Udayavani |

ಪಿರಿಯಾಪಟ್ಟಣ: ರೈತರಿಗೆ ತಂಬಾಕು ಬೆಳೆ ಅನಿವಾರ್ಯವಲ್ಲ, ಹಾಗಾಗಿ ಅವರು ಪರ್ಯಾಯ ಬೆಳೆಯತ್ತ ಗಮನ ಹರಿಸುವುದು ಉತ್ತಮ ಎಂದು ರೇಷ್ಮೆ ಹಾಗೂ ಪಶುಪಾಲನಾ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

Advertisement

ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣಮಂಟಪದಲ್ಲಿ ಭಾರತೀಯ ತಂಬಾಕು ಮಂಡಳಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 23 ಟೊಬೋಕೋ ಪಾರ್ಮರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಟಿಸಿ ಕಂಪನಿಯವರು ರೈತರನ್ನು ಉತ್ತೇಜನ ಕೊಡುತ್ತೇವೆ, ಆ ಸಹಕಾರ ಕೊಡುತ್ತೇವೆ, ಈ ಸಹಕಾರ ಕೊಡುತ್ತೇವೆ ಎಂದು 100 ಮಿಲಿಯನ್, 200 ಮಿಲಿಯನ್ ತಂಬಾಕು ಬೆಳೆಯಿರಿ ಎಂದು ಪುಸಲಾಯಿಸುತ್ತಿದ್ದಾರೆ ಆದರೆ ಕಂಪನಿಯವರ ಬಣ್ಣದ ಮಾತಿಗೆ ಬೆರಗಾಗಿ ಅವರ ಮಾತನನ್ನು ನಂಬಿದರೆ ನಿಮ್ಮ ತಲೆಯ ಮೇಲೆ ನೀವೇ ಚಪ್ಪಡಿ ಎಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಿಗಮ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಬೆಳೆಯಿರಿ ನೀವು ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆ ಸಿಗಬೇಕು ಎಂದರೆ ನೀವು ಕಡಿಮೆ ತಂಬಾಕು ಬೆಳೆಯಬೇಕು, ಆಂಧ್ರದಲ್ಲಿ ಪ್ರತಿ ಕೆಜಿ ತಂಬಾಕಿಗೆ ರೂ.282 ಸರಾಸರಿ ನೀಡುತ್ತಿದ್ದಾರೆ.

ಆಂಧ್ರಕ್ಕಿಂತಲೂ ಉತ್ಕೃಷ್ಟ ತಂಬಾಕನ್ನು ನಮ್ಮ ರೈತರು ಬೆಳೆಯುತ್ತಾರೆ ಹಾಗಾಗಿ ಸಹಜವಾಗಿ ಒಳ್ಳೆಯ ಬೆಲೆಯನ್ನು ನಿರೀಕ್ಷೆ ಮಾಡುತ್ತಾರೆ ಅವರ ನೀರೀಕ್ಷೆಯ ಬೆಲೆಯನ್ನು ಪುರಸ್ಕರಿಸುವುದು ಕಂಪನಿಯ ಜವಾಬ್ದಾರಿ ಎಂದರು.

ತಂಬಾಕು ಬೆಳೆಯುವ ರೈತರ ಬದುಕು ಅಲ್ಪಮಟ್ಟದಲ್ಲಿ ಸುಧಾರಣೆಯಾಗಿರಬಹುದು ಆದರೆ ಅದಕ್ಕಾಗಿ ಅವರು ವ್ಯಯಿಸಿರುವ ಶ್ರಮ, ಇದರಿಂದ ಅವರು ಅನುಭವಿಸಿರುವ ಸಂಕಷ್ಟ ಎಷ್ಟಿದೆ ಎಂದು ಕಂಪನಿಗಳು ಯೋಚಿಸಬೇಕು ಕೇವಲ ರೈತರನ್ನು ತಂಬಾಕನ್ನು ಬೆಳೆಯಲು ಉತ್ತೇಜಿಸುವ ಬದಲಾಗಿ ರೈತರನ್ನು ಉಳಿಸಿಕೊಳ್ಳುವ ಕೆಲಸವನ್ನು ಕಂಪನಿಗಳು ಮಾಡಬೇಕು ಎಂದರು.

Advertisement

ಕೆ.ಆರ್.ಆಸ್ಪತ್ರೆಯಲ್ಲಿ ಐಟಿಸಿ ನೆರವಿನ ವಿಭಾಗ ಸ್ಥಾಪಿಸಿ:
ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಮಾತನಾಡಿ ಐಟಿಸಿ ಕಂಪನಿ ಇಂದು ರೈತರ ನೆರವಿನಿಂದ ಇಂದು ದೊಡ್ಡ ಇಂಡಸ್ಟೀಯಾಗಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಇಂದು ಇವರ ಆದಾಯ ರೂ. 4535 ಕೋಟಿಗೂ ಹೆಚ್ಚು. ಆದರೆ ಕಂಪನಿ ಲಾ ಪ್ರಕಾರ ಇವರು ಶೇ.2 ರಷ್ಟು ಹಣವನ್ನು ರೈತರಿಗಾಗಿ ವಿನಿಯೋಗ ಮಾಡಬೇಕು ಆದರೆ ಈ ಕೆಲಸವನ್ನು ಇವರು ಮಾಡುತ್ತಿಲ್ಲ, ಹೊಟೇಲ್ ನಲ್ಲಿ 20 ಜನ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ನೆರವಿಗೆ ಕಾರ್ಮಿಕ ಇಲಾಖೆ ನೆರವಿಗೆ ಧಾವಿಸುತ್ತದೆ ಆದರೆ ರೈತ ತಂಬಾಕು ಬೆಳೆಯಲು ತನ್ನಲ್ಲಿರುವ ಎಲ್ಲಾ ಶ್ರಮವನ್ನು ವ್ಯಯಿಸಿ ಆರೋಗ್ಯ ಕೆಟ್ಟರೆ ಯಾರೂ ಬರುವುದಿಲ್ಲ ಹಾಗಾಗಿ ಹೆಚ್ಚು ತಂಬಾಕು ಬೆಳೆಯುವ ಮೈಸೂರು ಪ್ರಾಂತ್ಯಯದ ತಂಬಾಕು ಬೆಳೆಗಾರರ ಆರೋಗ್ಯ ರಕ್ಷಣೆಗಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಐಟಿಸಿ ವತಿಯಿಂದ ನೆರವಿನ ಘಟಕ ಸ್ಥಾಪಿಸಬೇಕು ಎಂದು ಐಟಿಸಿ ಕಂಪನಿಯನ್ನು ಒತ್ತಾಯಿಸಿದರು.

ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ ತಂಬಾಕು ಐಟಿಸಿ ಕಂಪನಿಗೆ ತಾಯಿಬೇರು ಇದ್ದಹಾಗೆ. ಆದರೆ ರೈತರಿಗೆ ಬೆಲೆ ಸಮಸ್ಯೆ ಎದುರಾದರೆ ಕಂಪನಿ ಮಾತ್ರ ರೈತರ ನೆರವಿಗೆ ಬರುವ ಬದಲು ಕೈಕಟ್ಟಿ ಕೂರುತ್ತಿರುವುದು ನೋವಿನ ಸಂಗತಿ. ಕೆಲವೊಮ್ಮೆ ಐಟಿಸಿಯವರು ಇತರೆ ಕಂಪನಿಗಳಿಗಿಂತ 2- 3 ಬೇಲ್ ಗೆ ಹೆಚ್ಚು ಹಣ ಕೊಟ್ಟು ಖರೀಧಿ ಮಾಡಿದರೂ ಅದು ಕ್ಷಣಿಕ ಬೇರೆ ಕಂಪನಿಗಳು ಖರೀದಿಸುವ ಬೇಲ್ ಗಳನ್ನು ಇವರೇ ಅವರಿಂದ ಖರೀದಿ ಮಾಡುತ್ತಾರೆ ಆಗಾಗಿ ನಮ್ಮ ರೈತರು ಖುಷಿ ಪಡುವ ಅಗತ್ಯವಿಲ್ಲ, ತಂಬಾಕು ಬೆಳೆಗಾರರಿಗೆ ಸರಾಸರಿ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳು ಚರ್ಚಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇದರಿಂದ ಬೆಳೆಗಾರರ ಹಿತ ಕಾಪಾಡಿದ ಹಾಗಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತಂಬಾಕು ಕೃಷಿಯಲ್ಲಿ ಸಾಧನೆಗೈದ 10 ಮಂದಿ ರೈತರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

ಹೆಚ್.ಡಿ.ಕೋಟೆ ಶಾಸಕ ಅನೀಲ್ ಚಿಕ್ಕಮಾದು, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಭಾರತೀಯ ತಂಬಾಕು ಮಂಡಳಿ ನಿರ್ದೆಶಕ ಶರತ್ ಟಂಡನ್, ಸಿಟಿಆರ್ಐ ಮುಖ್ಯಸ್ಥ ರಾಮಕೃಷ್ಣನ್, ಮೈಸೂರು ವ್ಯವಸ್ಥಾಪಕ ನಿರ್ದೆಶಕ ಬ್ರಿಜುಭೂಷಣ್, ಡಾ.ಶ್ರೀಧರ್ ಬಾಬು, ತಂಬಾಕು ಮಂಡಳಿ ವ್ಯವಸ್ಥಾಪಕ ಕೃಷ್ಣಕುಮಾರ್, ಸೇರಿದಂತೆ ಸಾವಿರಾರು ರೈತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next