Advertisement

ಹುಣಸೂರು: ತಂಬಾಕು ಬೆಳೆಗಾರರ ಪ್ರತಿಭಟನೆ; ಶಾಸಕ ಮಂಜುನಾಥ್ ಹರಾಜು ಮಾರುಕಟ್ಟೆಗೆ ಭೇಟಿ

12:51 PM Oct 20, 2022 | Team Udayavani |

ಹುಣಸೂರು: ತಂಬಾಕು ಬೆಳೆಗಾರರೊಂದಿಗೆ ಜನಪ್ರತಿನಿಧಿಗಳಿದ್ದೇವೆ. ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.

Advertisement

ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ರೈತರು ಕಟ್ಟೆಮಳಲವಾಡಿ ಮತ್ತು ಚಿಲ್ಕುಂದದಲ್ಲಿ ತಂಬಾಕು ಹರಾಜು ಬಹಿಷ್ಕರಿಸಿ, ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಕಟ್ಟೆಮಳಲವಾಡಿ ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ಹರಾಜು ಮಾರುಕಟ್ಟೆ ಸೂಪರಿಡೆಂಟ್ ಹಾಗೂ ರೈತರೊಂದಿಗೆ ಚರ್ಚಿಸಿದ ಸಂದರ್ಭ ಈ ಮಾತುಗಳನ್ನು ಹೇಳಿದರು.

ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರಿಂದ ಮಾಹಿತಿ ಪಡೆದ ನಂತರ ಮಂಡಳಿಯ ಹರಾಜು ಅಧೀಕ್ಷಕ ವೇಣೊಗೋಪಾಲ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಶಾಸಕರು, ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಮಾರುಕಟ್ಟೆಯಲ್ಲಿ ತಾವಿದ್ದು, ರೈತರ ಸಭೆ ನಡೆಸಲಾಗುವುದೆಂಬ ಅಧೀಕ್ಷಕರ ಹೇಳಿಕೆಗೆ ಮೊದಲು ಖರೀದಿ ಕಂಪನಿಯವರು, ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಮುಂದಾಗಿ. ರೈತರ ಬದುಕಿನೊಂದಿಗೆ ಕಂಪನಿಯವರು ಚೆಲ್ಲಾಟವಾಡುತ್ತಿದ್ದು, ಮಂಡಳಿ ನೆರವಿಗೆ ಬರಬೇಕೆಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next