Advertisement

ಆರ್ಥಿಕ ನೆರವು ನೀಡಲು ಬುರುಡ ಸಮಾಜದ ಮನವಿ

12:21 PM May 16, 2020 | Suhan S |

ಮಹಾಲಿಂಗಪುರ: ಪಟ್ಟಣದ ಬುರುಡ (ಮೇದಾರ) ಸಮಾಜದ ಬಡಜನರು ಲಾಕ್‌ ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿದ್ದು, ಆರ್ಥಿಕ ಸಹಾಯ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಬುರುಡ ಸಮಾಜದ ಅಧ್ಯಕ್ಷ ಹನಮಂತ ಬುರುಡ ಮಾತನಾಡಿ, ಕೆಲಸ ಕಾರ್ಯಗಳಿಲ್ಲದೆ ಸಮಾಜದ25 ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಕಾರಣ ಸಮುದಾಯವು ಬಿದಿರು ಬೊಂಬುಗಳಿಂದ ತಯಾರಿಸಿದ ಬುಟ್ಟಿ, ಮೊರ ಮುಂತಾದ ದಿನನಿತ್ಯ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಎರಡು ತಿಂಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಾಜದ ಬಡವರಿಗೂ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದರು.

ಬುರುಡ ಸಮಾಜದ ಬಸವರಾಜ ಬುರುಡ, ಬಸಪ್ಪ ಬುರುಡ, ಗಂಗಪ್ಪ ಬುರುಡ, ರಾಯಪ್ಪ ಬುರುಡ, ಸಂತೋಷ ಬುರುಡ, ಭೀಮಸಿ ಬುರುಡ, ರವಿ ಬುರುಡ, ಸಂಗಮೇಶ ಬುರುಡ, ಮಾಂತೇಶ ಬುರುಡ, ಮಾನಿಂಗ ಬುರುಡ, ಪ್ರಭು ಬುರುಡ, ಶ್ರೀಕಾಂತ ಬುರುಡ, ಮಲ್ಲಪ್ಪ ಮೇದಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next